Advertisement

ಟಿ20 ವಿಶ್ವಕಪ್‌ ಕ್ರಿಕೆಟ್‌ ವೈಫ‌ಲ್ಯ: ರಾಷ್ಟ್ರೀಯ ಕ್ರಿಕೆಟ್‌ ಆಯ್ಕೆ ಸಮಿತಿ ಬರ್ಖಾಸ್ತು

10:51 PM Nov 18, 2022 | Team Udayavani |

ಹೊಸದಿಲ್ಲಿ: ಭಾರತದ ಟಿ20 ವಿಶ್ವಕಪ್‌ ಕ್ರಿಕೆಟ್‌ ವೈಫ‌ಲ್ಯದ ಬೆನ್ನಲ್ಲೇ ಬಿಸಿಸಿಐ ಚೇತನ್‌ ಶರ್ಮ ನೇತೃತ್ವದ ಆಯ್ಕೆ ಸಮಿತಿಯನ್ನು ಬರ್ಖಾಸ್ತುಗೊಳಿಸಿದೆ. ಶುಕ್ರವಾರ ರಾತ್ರಿ ಈ ದಿಢೀರ್‌ ಬೆಳವಣಿಗೆ ಸಂಭವಿಸಿತು.

Advertisement

ಚೇತನ್‌ ಶರ್ಮ ನೇತೃತ್ವದ ಸಮಿತಿಯಿಂದ ಆರಿಸಲ್ಪಟ್ಟ ಭಾರತ ತಂಡ 2021ರ ಟಿ20 ವಿಶ್ವಕಪ್‌ನಲ್ಲೂ ಯಶಸ್ಸು ಕಂಡಿರಲಿಲ್ಲ. ಅದು ನಾಕೌಟ್‌ ತಲುಪಲು ವಿಫ‌ಲವಾಗಿತ್ತು. ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲೂ ಸೋತಿತ್ತು.

ಚೇತನ್‌ ಶರ್ಮ ನೇತೃತ್ವದ ಸಮಿತಿಯಲ್ಲಿನ ಇತರ ಸದಸ್ಯರೆಂದರೆ ಹರ್ವಿಂದರ್‌ ಸಿಂಗ್‌ (ಕೇಂದ್ರ ವಲಯ), ಸುನೀಲ್‌ ಜೋಶಿ (ದಕ್ಷಿಣ ವಲಯ) ಮತ್ತು ದೇಬಶಿಷ್‌ ಮೊಹಂತಿ (ಪೂರ್ವ ವಲಯ). ಅಬೆ ಕುರುವಿಲ್ಲ ಅವಧಿ ಮುಗಿದ ಬಳಿಕ ಪಶ್ಚಿಮ ವಲಯವನ್ನು ಯಾರೂ ಪ್ರತಿನಿಧಿಸಿರಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next