Advertisement

ತು.ರ.ವೇ. ಯುವ ಘಟಕ ಮನವಿ 

10:58 AM Dec 31, 2017 | |

ಮಹಾನಗರ: ಹೊಸ ವರ್ಷಾಚರಣೆಯ ಹೆಸರಿನಲ್ಲಿ ತುಳು ನಾಡಿನ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುವ ರೀತಿಯ ಪಾಶ್ಚಿಮಾತ್ಯ ಕಾರ್ಯಕ್ರಮಗಳನ್ನು ನಿಷೇಧಿಸುವಂತೆ ತುಳುನಾಡ ರಕ್ಷಣಾ ವೇದಿಕೆಯ ಯುವ ಘಟಕ ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅವರಿಗೆ ಮನವಿ ಸಲ್ಲಿಸಿದೆ.

Advertisement

ಡಿ. 31ರಂದು ಎಲ್ಲಾ ಬಾರ್‌, ಪಬ್‌ ಗಳು ರಾತ್ರಿ 11 ಗಂಟೆಯ ಒಳಗೆ ಮುಚ್ಚಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಲ್ಲಿ ಅದಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ತು.ರ.ವೇ. ಯುವ ಘಟಕ ಮನವಿಯಲ್ಲಿ ವಿವರಿಸಿದೆ.

ತುರವೇ ಯುವ ಘಟಕ ಜಿಲ್ಲಾಧ್ಯಕ್ಷ ಹರೀಶ್‌ ಶೆಟ್ಟಿ ಪನಿಯೂರ್‌, ಜ್ಯೋತಿ ಜೈನ್‌, ಪ್ರಸಾದ್‌ ಕುಮಾರ್‌, ತನ್ವೀರ್‌ ಕಂಕನಾಡಿ, ರಕ್ಷಿತ್‌ ಬಂಗೇರ ಕುಡುಪು, ಪ್ರಸಾದ್‌ ಕೊಂಚಾಡಿ, ನಾಗರಾಜ್‌ ಕುದ್ರೋಳಿ, ಭೂಷಣ್‌ ಕುಲಾಲ್‌, ಶಿವಪ್ರಸಾದ್‌, ಪುರಂದರ ರೈ, ಆನಂದ್‌ ಅಮೀನ್‌ ಅಡ್ಯಾರ್‌, ಗಂಗಾಧರ್‌ ಅತ್ತಾವರ ನಿಯೋಗದಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next