Advertisement

Manipal; ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

12:53 AM Mar 05, 2024 | Team Udayavani |

ಮಣಿಪಾಲ: ಪ್ರಸಿದ್ಧ ಹಿಂದೂಸ್ಥಾನೀ ಕಲಾವಿದೆ ಕಿಶೋರಿ ಅಮೋನ್ಕರ್‌ ಸ್ಮರಣಾರ್ಥ ಪುಣೆಯಲ್ಲಿ ನಾಟ್ಯ ಸಂಪದ ಪ್ರತಿಷ್ಠಾನ ಏರ್ಪಡಿಸಿದ ಮೂರು ದಿನಗಳ ಸಂಗೀತೋತ್ಸವದಲ್ಲಿ ಹೆಸರಾಂತ ಹಾಡುಗಾರರಿಗೆ ಸಹಕಲಾವಿದರಾಗಿ ಸಹಕರಿಸಿದ ಹಿರಿಯ ತಬ್ಲಾ ಕಲಾವಿದ ಮಣಿಪಾಲದ ಪಂ| ಟಿ. ರಂಗ ಪೈ ಮತ್ತು ಪಂ| ನಾನಾ (ಶಶಿಕಾಂತ್‌) ಮುಳೆ ಅವರಿಗೆ ಗಾನ ಸರಸ್ವತಿ ಸಂಗತ್ಕಾರ್‌ ಪುರಸ್ಕಾರ ನೀಡಿ ಗೌರವಿಸಲಾಯಿತು.

Advertisement

ಮೊದಲ ದಿನ ಯುವ ಕಲಾವಿದರಾದ ಮುಂಬಯಿಯ ಮಾನಸ ಕುಮಾರ್‌ (ಹಿಂದೂಸ್ಥಾನೀ ಪಿಟೀಲು), ಇಶಾನ್‌ ಘೋಷ್‌ (ತಬ್ಲಾ), ಬೆಂಗಳೂರಿನ ಅಭಯ್‌ ನಯಂಪಳ್ಳಿ (ಕರ್ನಾಟಕ ಸಂಗೀತದ ಗಿಟಾರ್‌) ಅವರಿಗೆ ಬೆಲ್ವಂಕಾರ್‌ ಗ್ರೂಪ್‌ ಪುರಸ್ಕೃತ ಗಾನ ಸರಸ್ವತೀ ಯುವ ಪುರಸ್ಕಾರ, ಮೂರನೆಯ ದಿನ ಮೋಹನವೀಣಾ ಕಲಾವಿದ ಜೈಪುರದ ಪಂ| ವಿಶ್ವಮೋಹನ ಭಟ್‌ ಅವರಿಗೆ ಗಾನ ತಪಸ್ವಿನಿ ಮೊಗುಬಾೖ ಕುರ್ಡಿಕರ್‌ ಸಮ್ಮಾನ್‌ ನೀಡಿ ಗೌರವಿಸಲಾಯಿತು.

ಪ್ರತಿಷ್ಠಾನದ ಸಂಸ್ಥಾಪಕ, ಕಿಶೋರಿಯವರ ಶಿಷ್ಯ ಪಂ| ರಘುನಂದನ್‌ ಪನ್ಶಿಕರ್‌, ಅಪರ್ಣಾ ಪನ್ಶಿಕರ್‌, ಕಿಶೋರಿಯವರ ಪುತ್ರರಾದ ಬಿಬಾಸ್‌ ಅಮೋನ್ಕರ್‌, ನಿಹಾರ್‌ ಅಮೋನ್ಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next