Advertisement

Coimbatore : ಭರ್ಜರಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದ ಅಣ್ಣಾಮಲೈ

03:00 PM Mar 27, 2024 | Team Udayavani |

ಕೊಯಮತ್ತೂರು: ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಮುನ್ನ ಕೊಯಮತ್ತೂರಿನ ಪ್ರಸಿದ್ಧ ಕೊನಿಯಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

Advertisement

ದೇವರ ದರ್ಶನದ ಬಳಿಕ ಕೊಯಮತ್ತೂರು ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿದರು. ಬಿಜೆಪಿ ನಾಯಕಿ, ಕೊಯಮತ್ತೂರು ದಕ್ಷಿಣ ಶಾಸಕಿ ವನತಿ ಶ್ರೀನಿವಾಸನ್, ಬಿಜೆಪಿ ಪದಾಧಿಕಾರಿಗಳಾದ ಅಮರ್ ಪ್ರಸಾದ್ ರೆಡ್ಡಿ, ಜಿ.ಕೆ.ನಾಗರಾಜ್, ಹಿಂದೂ ಪೀಪಲ್ಸ್ ಪಾರ್ಟಿ ನಾಯಕ ಅರ್ಜುನ್ ಸಂಪತ್ ಸೇರಿದಂತೆ ಹಲವರು ಅಣ್ಣಾಮಲೈ ಅವರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಕೊಯಮತ್ತೂರಿನ ಜನರೆಲ್ಲ ನನ್ನ ಮೇಲೆ ಪ್ರೀತಿಯ ಸುರಿಮಳೆಗೈಯುತ್ತಿದ್ದಾರೆ, ಕೊಯಮತ್ತೂರಿನಲ್ಲಿ ಬಿಜೆಪಿ ಆಡಳಿತಾರೂಢ ಶಕ್ತಿಗಳೊಂದಿಗೆ ಪೈಪೋಟಿ ನಡೆಸುತ್ತಿದೆ, ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಅವರು ಭೂ ಮಂಜೂರಾತಿಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ 4 ಬಾರಿ ಮಾತನಾಡಿದ್ದಾರೆ. ಕೊಯಮತ್ತೂರು ವಿಮಾನ ನಿಲ್ದಾಣ ವಿಸ್ತರಣೆ ಕುರಿತು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ 3 ಬಾರಿ ಪತ್ರ ಬರೆದಿದ್ದಾರೆ ಎಂದರು.

ಕೊಯಮತ್ತೂರು ಅಭಿವೃದ್ಧಿಯಾಗಬಾರದು ಎಂದು ರಾಜ್ಯ ಸರಕಾರ ಅಡ್ಡಿ ಮಾಡುತ್ತಿದೆ. ಕೊಯಮತ್ತೂರಿನ ಅಭಿವೃದ್ಧಿಗೆ ಡಿಎಂಕೆ ಮತ್ತು ಮಾರ್ಕ್ಸ್‌ವಾದಿ ಪಕ್ಷದ ಸಂಸದರು ಅಡ್ಡಿಯಾಗಿದ್ದರು. ಕೊಯಮತ್ತೂರು ಸಂಸದರು ಉದ್ಯಮದ ಬೇಡಿಕೆಗಳನ್ನು ಪರಿಹರಿಸಿದ್ದಾರೆಯೇ? ಕೊಯಮತ್ತೂರು ಸಂಸದೀಯ ಸ್ಥಾನಕ್ಕೆ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಅಭ್ಯರ್ಥಿಯ ಅಗತ್ಯವಿದೆ ಎಂಬುದನ್ನು ಸಾರ್ವಜನಿಕರು ಅರಿತುಕೊಂಡಿದ್ದಾರೆ ಎಂದರು.

Advertisement

ಕೊಯಮತ್ತೂರು ಲೋಕಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್‌ಕುಮಾರ್ ಕೂಡ ಇಂದು ನಾಮಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next