Advertisement

ಸೋಂಕು ಲಕ್ಷಣ ಇಲ್ಲದವರೇ ಹೆಚ್ಚು; ಎಲ್ಲೆಂದರಲ್ಲಿ ಅಲೆದಾಟ

12:50 PM Jan 17, 2022 | Team Udayavani |

ಮಂಡ್ಯ: ಪ್ರತಿದಿನ ಶತಕ ದಾಟಿ ಕೊರೊನಾ ಸೋಂಕಿನ ಪ್ರಕರಣ ದಾಖಲಾಗುತ್ತಿದ್ದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

Advertisement

ಜಿಲ್ಲೆಯಲ್ಲಿ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದ್ದರೂ ಹೋಂ ಐಸೋಲೇಷನ್‌ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸೋಂಕಿನ ಯಾವುದೇ ಗುಣಲಕ್ಷಣಗಳಿಲ್ಲದ ಸೋಂಕಿತ ಮನೆಯಲ್ಲಿ ಪ್ರತ್ಯೇಕವಾಗಿರಲು ಎಲ್ಲಾ ವ್ಯವಸ್ಥೆ ಇದ್ದರೆ ಮಾತ್ರ ಹೋಂ ಐಸೋಲೇಷನ್‌ಗೆ ಅವಕಾಶ ನೀಡಲಾಗುತ್ತದೆ.

ಲಕ್ಷಣ ಇಲ್ಲದವರೇ ಹೆಚ್ಚು: ಸೋಂಕಿನ ಲಕ್ಷಣ ಇಲ್ಲದವರೇ ಹೆಚ್ಚಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 2395 ಸಕ್ರಿಯ ಪ್ರಕರಣ ಪೈಕಿ 1595 ಮಂದಿಗೆ ಸೋಂಕಿನ ಲಕ್ಷಣಗಳಿಲ್ಲ. ಇವರೆಲ್ಲರೂ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಉಳಿದಂತೆ ಕೋವಿಡ್‌ಕೇರ್‌ ಸೆಂಟರ್‌ನಲ್ಲಿ 742, ಸರ್ಕಾರಿ ಆಸ್ಪತ್ರೆಗಳಲ್ಲಿ 58 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ಸ್ಫೋಟ: ಜಿಲ್ಲೆಯಲ್ಲಿ ಪ್ರತಿದಿನ 500ಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ತಾಲೂಕುಗಳಲ್ಲೇ ಹೆಚ್ಚುಸೋಂಕಿತರು ಕಂಡು ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಮೊದಲ, ಎರಡನೇ ಹಾಗೂ ಮೂರನೇ ಅಲೆ ಸೇರಿದಂತೆ ಒಟ್ಟು 77008 ಪ್ರಕರಣ ದಾಖಲಾಗಿವೆ.

ಸಕ್ರಿಯ ಪ್ರಕರಣ ಹೆಚ್ಚಳ: ಪ್ರತಿದಿನ ಸಕ್ರಿಯ ಪ್ರಕರಣ ಹೆಚ್ಚಾಗುತ್ತಿದೆ. ಮಂಡ್ಯ 685, ಮದ್ದೂರು 455, ಮಳವಳ್ಳಿ 276, ಪಾಂಡವಪುರ 316, ಶ್ರೀರಂಗಪಟ್ಟಣ257, ಕೆ.ಆರ್‌.ಪೇಟೆ 162 ಹಾಗೂ ನಾಗಮಂಗಲದಲ್ಲಿ 214 ಸಕ್ರಿಯ ಪ್ರಕರಣಗಳಿವೆ.

Advertisement

ಪರೀಕ್ಷೆಗೆ ಮುಗಿ ಬೀಳುತ್ತಿರುವ ಯುವಕರು: ಮಂಡ್ಯ ನಗರ ಸೇರಿ ಜಿಲ್ಲೆಯ ವಿವಿಧೆಡೆ ತೆರೆಯಲಾಗಿರುವ ಮಾದರಿ ಸಂಗ್ರಹ ಕೇಂದ್ರಗಳಲ್ಲಿಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಇದರಿಂದ ಪ್ರತಿದಿನ3 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ.

ವೇಗ ಪಡೆದುಕೊಂಡ ಸೋಂಕು: ಜಿಲ್ಲೆಯಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಕಳೆದ ಒಂದು ವಾರದಿಂದ ಎರಡಂಕಿ ದಾಟಿಸೋಂಕು ಪ್ರಕರಣ ದಾಖಲಾಗುತ್ತಿವೆ. ಡಿಸೆಂಬರ್‌ನಲ್ಲಿ ಒಂದಂಕಿ ಪ್ರಕರಣ ದಾಖಲಾಗುತ್ತಿದ್ದವು. ನಂತರ ಜನವರಿ 1ರಿಂದ ಕೊರೊನಾ ಸೋಂಕುವೇಗ ಪಡೆದು ಕೊಂಡಿದೆ. ಜ.5ರಂದು 36 ಪ್ರಕರಣ ದಾಖಲಾದರೆ, 6ರಂದು 66 ಪ್ರಕರಣ ದಾಖಲಾಗುವ ಮೂಲಕ ಅದರ ಸಂಖ್ಯೆದುಪ್ಪಟ್ಟಾಗಿತ್ತು. 7ರಂದು 129, 8 ರಂದು 183,9ರಂದು 261, 10ರಂದು 306, 11 ರಂದು 263, 12ರಂದು 319, 13ರಂದು 406, 14ರಂದು554, 15ರಂದು 718 ಪ್ರಕರಣ ದಾಖಲಾಗಿವೆ.

ಸೋಂಕು ಹೆಚ್ಚಲು ನಿರ್ಲಕ್ಷವೇ ಕಾರಣ :

ಕೆಲವು ಸೋಂಕಿತರು ಯಾವುದೇ ವ್ಯವಸ್ಥೆ ಇಲ್ಲದಿದ್ದರೂ ಹೋಂ ಐಸೋಲೇಷನ್‌ನಲ್ಲಿ ಉಳಿದಿದ್ದಾರೆ. ಅಲ್ಲದೆ, ಗುಣಲಕ್ಷಣ ಇಲ್ಲದಿರುವುದರಿಂದ ಪ್ರತ್ಯೇಕವಾಗಿರದೆ ನಿರ್ಲಕ್ಷ್ಯ ವಹಿಸಿ ಎಲ್ಲೆಂದರಲ್ಲಿ ಅಡ್ಡಾಡುತ್ತಿರುವುದರಿಂದ ಸೋಂಕು ಹೆಚ್ಚಾಗುತ್ತಿದೆ ಎಂಬ ಆತಂಕವೂ ಹೆಚ್ಚಾಗಿದೆ. ಆಯಾ ತಾಲೂಕಿನಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗಿದೆ. ಅಲ್ಲದೆ,ಸರ್ಕಾರದ ನಿರ್ದೇಶನದಂತೆ ಸೋಂಕಿನ ಲಕ್ಷಣಗಳಿಲ್ಲದವರಿಗೆ ಹೋಂ ಐಸೋಲೇಷನ್‌ಗೆ ಅವಕಾಶ ನೀಡುವಂತೆ ಸೂಚಿಸಿದೆ. ಇದೇ ಈಗ ಸೋಂಕು ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.

ಜಿಲ್ಲೆಯಲ್ಲಿ ಪ್ರತಿದಿನ ಸೋಂಕಿನ ಪ್ರಕರಣ ಏರಿಕೆಯಾಗುತ್ತಲೇ ಇದೆ. ಸೋಂಕಿನ ಲಕ್ಷಣ ಇಲ್ಲದವರಿಗೆ ಸರ್ಕಾರದ ನಿರ್ದೇಶನದಂತೆ ಹೋಂ ಐಸೋಲೇಷನ್‌ಗೆ ಅವಕಾಶ ನೀಡಲಾಗುತ್ತಿದೆ. ಸೋಂಕಿತರು ನಿಯಮ ಉಲ್ಲಂಘಿಸಬಾರದು. ಅಲ್ಲದೇ, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಕಾಪಾಡಬೇಕು. – ಡಾ.ಟಿ.ಎನ್‌.ಧನಂಜಯ, ಡಿಎಚ್‌ಒ, ಮಂಡ್ಯ

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next