Advertisement

ಕರ್ನಾಟಕದ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿದ ಬಂಗಾಲ

05:34 PM Nov 09, 2021 | Team Udayavani |

ಗುವಾಹಟಿ: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿಯಲ್ಲಿ ಸತತ ನಾಲ್ಕು ಗೆಲುವು ಸಾಧಿಸಿ ಆತ್ಮ ವಿಶ್ವಾಸದಲ್ಲಿದ್ದ ಕರ್ನಾಟಕ ತಂಡಕ್ಕೆ ಬಂಗಾಳ ಆಘಾತ ನೀಡಿದೆ.

Advertisement

ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಬಂಗಾಲ ತಂಡಕ್ಕೆ 7 ವಿಕೆಟ್‌ಗಳ ಅಂತರದಿಂದ ಶರಣಾಗಿದೆ. ಈ ಮೂಲಕ ಮನೀಶ್‌ ಪಾಂಡೆ ಬಳಗ ಈ ಬಾರಿಯ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ ಬ್ಯಾಟಿಂಗ್‌ ವೈಫ‌ಲ್ಯವನ್ನು ಅನುಭವಿಸಿ 8 ವಿಕೆಟ್‌ಗೆ 134 ರನ್‌ಗಳಿಸಿತು. ಗುರಿ ಬೆನ್ನತ್ತಿದ ಬಂಗಾಲ ಅಭಿಮನ್ಯು ಈಶ್ವರನ್‌ (ಅಜೇಯ 51), ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ ವಿಕೆಟ್‌ನಷ್ಟಕ್ಕೆ 138 ರನ್‌ ಪೇರಿಸಿ ಗೆದ್ದು ಬೀಗಿತು.

ಇದನ್ನೂ ಓದಿ:ಭೂಗತಜಗತ್ತಿನ ಜತೆ ಫಡ್ನಾವೀಸ್ ಗೆ ಇರುವ ನಂಟನ್ನು ಬಹಿರಂಗಗೊಳಿಸುವೆ: ಮಲಿಕ್

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ- 8ಕ್ಕೆ 134 (ಕರುಣ್‌ ನಾಯರ್‌ 44, ಮನೀಷ್‌ ಪಾಂಡೆ 32, ಮುಕೇಶ್‌ ಕುಮಾರ್‌ 33ಕ್ಕೆ 3) ಬಂಗಾಲ-3ಕ್ಕೆ 138 (ಅಭಿಮನ್ಯು ಈಶ್ವರನ್‌ ಅಜೇಯ 51, ಕೈಫ್ ಅಹ್ಮದ್‌ ಅಜೇಯ 34).

Advertisement
Advertisement

Udayavani is now on Telegram. Click here to join our channel and stay updated with the latest news.

Next