Advertisement

ಮಲೆ, ಮಂತ್ರಾಲಯ ಸ್ವತ್ಛ

11:17 AM Jun 13, 2018 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ಸ್ವತ್ಛ ಭಾರತ ಯೋಜನೆಯ 3ನೇ ಹಂತದಲ್ಲಿ ಸ್ವತ್ಛ ಸಾಂಪ್ರದಾಯಿಕ ಪ್ರದೇಶಗಳಿಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಾಲಯ, ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಸೇರಿದಂತೆ 10 ಹೊಸ ಪ್ರದೇಶಗಳನ್ನು ಸೇರಿಸಿಕೊಳ್ಳಲಾಗಿದೆ. ಮೊದಲ ಮತ್ತು ಎರಡನೇ ಹಂತದಲ್ಲಿ 20 ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಇಲ್ಲಿ ವಿಶೇಷ ಸ್ವತ್ಛತಾ ಅಭಿಯಾನ ಪ್ರಗತಿಯಲ್ಲಿದೆ. ಈಗ 3ನೇ ಹಂತದಲ್ಲಿ ಆಯ್ಕೆಯಾದ ಪ್ರದೇಶಗಳಲ್ಲೂ ಸುಧಾರಿತ ಚರಂಡಿ ವ್ಯವಸ್ಥೆ, ತ್ಯಾಜ್ಯ ಸಂಸ್ಕರಣಾ ಘಟಕ, ನೀರಿನ ಎಟಿಎಂಗಳು, ಸುಧಾರಿತ ನೈರ್ಮಲ್ಯ ವ್ಯವಸ್ಥೆ ಕಲ್ಪಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next