Advertisement

ಸ್ವಚ್ಛ ಸರ್ವೇಕ್ಷಣ್ 2021- ಸಾರ್ವಜನಿಕರ ಅಭಿಪ್ರಾಾಯ ಸಂಗ್ರಹ ಪ್ರಾರಂಭ

07:49 PM Jan 01, 2021 | Team Udayavani |

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲಿ (ಜ.1 ರಿಂದ 2021ನೇ ಸಾಲಿನ ಸ್ವಚ್ಛ ಸರ್ವೇಕ್ಷಣ್‌ನ ಭಾಗವಾದ ಜನಾಭಿಪ್ರಾಾಯ ಸಂಗ್ರಹ ಅಭಿಯಾನ ಶುರುವಾಗಿದೆ.

Advertisement

ಸ್ವಚ್ಛ ಸರ್ವೇಕ್ಷಣ್‌ನ ಭಾಗವಾಗಿ ಆಯಾ ನಗರದಲ್ಲಿನ ಸ್ವಚ್ಛತೆ ಹಾಗೂ ಕಸ ವಿಲೇವಾರಿ ವಿಧಾನಗಳ ಪಾಲನೆಯ ಬಗ್ಗೆ ಸಾರ್ವಜನಿಕರಿಂದಲೇ ತಿಳಿದುಕೊಳ್ಳಲು ಕೇಂದ್ರ ಸರ್ಕಾರ ಸ್ವಚ್ಛ ಸರ್ವೇಕ್ಷಣ್‌ನ ಭಾಗವಾಗಿ ಈ ಅಭಿಯಾಮನವನ್ನು ಪ್ರತಿ ವರ್ಷ ನಡೆಸುತ್ತದೆ. ಸಾರ್ವಜನಿಕರ ಅಭಿಪ್ರಾಾಯಕ್ಕಾಾಗಿ 1,800 ಅಂಕಗಳನ್ನು ನಿಗದಿಪಡಿಸಲಾಗಿದೆ. ಹೀಗಾಗಿ, ಸ್ವಚ್ಛ ಸರ್ವೇಕ್ಷಣ್‌ನ ರ್ಯಾಾಂಕಿಂಗ್‌ನ ಮೇಲೂ ಸಾರ್ವಜನಿಕರ ಅಭಿಪ್ರಾಾಯ ಪ್ರಮಾಣ ಪರಿಣಾಮ ಬೀರುತ್ತದೆ.

ರಾಜ್ಯದಲ್ಲಿ ಯಾವುದೇ ನಗರದಲ್ಲಿದ್ದರೂ ಸಾರ್ವಜನಿಕರು swachhsurvekshan2021.org ಲಿಂಕ್‌ನ ಮೂಲಕ ನಿರ್ದಿಷ್ಟ ನಗರವನ್ನು ಆಯ್ಕೆೆ ಮಾಡಿಕೊಳ್ಳುವ ಮೂಲಕ ಅಭಿಪ್ರಾಾಯ ದಾಖಲಿಸಬಹುದಾಗಿದೆ.

ಸಾರ್ವಜನಿಕ ಅಭಿಪ್ರಾಾಯ ಸಂಗ್ರಹ ಅಭಿಯಾನ ಜ.1ರಿಂದ ಮಾ.31ರ ವರೆಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next