Advertisement

ಹಾಸ್ಟೆಲ್ ಬಳಿ ವಿದ್ಯಾರ್ಥಿಯ ಅನುಮಾನಾಸ್ಪದ ಸಾವು: ಪ್ರತಿಭಟನೆ ‌

09:46 AM Aug 10, 2019 | keerthan |

ವಿಜಯಪುರ: ನಗರದಲ್ಲಿರುವ ಪದವಿ ಪೂರ್ವ ಕಾಲೇಜು ಹಾಸ್ಟೆಲ್ ಹಿಂಬದಿಯ ಬಾವಿಯಲ್ಲಿ‌ ವಿದ್ಯಾರ್ಥಿ ಶವ ಪತ್ತೆಯಾಗಿದ್ದು, ಸಾವಿನ ‌ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

ವಿಜಯಪುರ ನಗರದ ಹೊರ ಭಾಗದ ಲೊಯೋಲಾ ಪಿಯು ಕಾಲೇಜಿನ ವಿದ್ಯಾರ್ಥಿ ಶ್ರೀಕಾಂತ ದಯಾನಂದ ನಾಲವಾರ ಮೃತ ವಿದ್ಯಾರ್ಥಿ.

ಬಾವಿಯಲ್ಲಿ ಕಡಿಮೆ ನೀರು ಇರುವ‌ ಕಾರಣ ಹಾಗೂ ಕತ್ತಿನ ಭಾಗದಲ್ಲಿ ಗಾಯಗಳು ಇರುವುದರಿಂದ ವಿದ್ಯಾರ್ಥಿ ಸಾವಿನ‌ ಕುರಿತು ಪಾಲಕರು ಸಂಶಯ‌‌‌ ವ್ಯಕ್ತಪಡಿಸಿದ್ದಾರೆ. ತಮ್ಮ‌ಮಗನನ್ನು ಹತ್ಯೆ‌ ಮಾಡಲಾಗಿದೆ ಎಂದು ಆರೋಪಿಸಿರುವ ಪೋಷಕರು ಗ್ರಾಮಸ್ಥರೊಂದಿಗೆ ಪ್ರತಿಭಟನೆ ‌ನಡೆಸಿದ್ದಾರೆ.

ಲೊಯೋಲಾ ಕಾಲೇಜು ಪ್ರಾಂಶುಪಾಲ, ಹಾಸ್ಟೇಲ್ ವಾರ್ಡನ್ ಬಂಧಿಸಲು ಆಗ್ರಹಿಸಿ ಬಾಲಕನ ಶವದ ಮರಣೋತ್ತರ ಪರೀಕ್ಷೆ ನಡೆಸಲು ಅಡ್ಡಿಪಡಿಸಿ ಪ್ರತಿಭಟಿಸುತ್ತಿದ್ದಾರೆ.

ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿದ್ದ ಬಾಲಕನ ಶವ ಹೊರ ತಂದು ಅಥಣಿ ರಸ್ತೆಯಲ್ಲಿ ಶವವಿಟ್ಟು ಹೋರಾಟ‌ ನಡೆಸುತ್ತಿದ್ದಾರೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಬಾಲಕನ ಶವದ ಮೆರವಣಿಗೆಗೆ ಪೊಲೀಸರು ತಡೆಯೊಡ್ಡಿದ್ದರಿಂದ ತಳ್ಳಾಟ ನೂಕಾಟ ನಡೆದ ಪ್ರಕರಣ ಕೂಡ ನಡೆಯಿತು.

Advertisement

ನಗರದ ಗೋಲಗುಂಬಜ್ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next