Advertisement

Namaz, ಆಜಾನ್‌ ವೇಳೆ ದುರ್ಗಾಪೂಜೆ ಸ್ಥಗಿತ: ಬಾಂಗ್ಲಾ ಸರಕಾರ

01:50 AM Sep 13, 2024 | Team Udayavani |

ಢಾಕಾ: ಹಿಂದೂಗಳು ನಮಾಜ್‌ ವೇಳೆ, ಅಜಾನ್‌ ಕೂಗುವ 5 ನಿಮಿಷಗಳ ಮುಂಚಿತವಾಗಿ ದುರ್ಗಾ ಪೂಜೆಯ ಚಟುವಟಿಕೆಗಳನ್ನು ನಿಲ್ಲಿಸಿ ಸಹಕರಿಸ ಬೇಕೆಂದು ಬಾಂಗ್ಲಾದೇಶದ ಮಧ್ಯಾಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್‌ ಮನವಿ ಮಾಡಿ ದ್ದಾರೆ. ದುರ್ಗಾಪೂಜೆ ವೇಳೆ ಸಂಭಾವ್ಯ ಗಲಭೆಗಳನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

Advertisement

ದುರ್ಗಾಪೂಜೆಯ ಸಂಗೀತ, ವಾದ್ಯಗಳನ್ನು ನಿಲ್ಲಿಸಿ ನಮಾಜ್‌ಗೆ ಅವಕಾಶ ನೀಡಬೇಕೆಂದು ಕೇಳಿಕೊಂಡಿ ದ್ದಾರೆ. ಈ ಬಗ್ಗೆ ಮಾತನಾಡಿದ ಗೃಹ ಇಲಾಖೆ ಸಲಹೆ ಗಾರ ಲೆಫ್ಟಿನೆಂಟ್‌ ಜನರಲ್‌(ನಿವೃತ್ತ) ಎಂಡಿ ಜಹಾಂ ಗೀರ್‌ ಆಲಂ ಚೌಧರಿ, ಇದಕ್ಕೆ ಹಿಂದೂ ಸಮುದಾಯ ಒಪ್ಪಿದೆ. ಜತೆಗೆ ಪೂಜೆ ವೇಳೆ ಹಿಂದೂಗಳಿಗೆ ಭದ್ರತೆ ಕಲ್ಪಿಸಲಾಗುವುದು, ಯಾವುದೇ ಅಡಚಣೆ ಬಾರದಂತೆ ನೋಡಿಕೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next