Advertisement

Sullia ಶಂಕಿತ ಇಲಿ ಜ್ವರ: ವ್ಯಕ್ತಿ ಸಾವು

12:59 AM Sep 04, 2024 | Team Udayavani |

ಸುಳ್ಯ: ಇಲ್ಲಿನ ಕನಕಮಜಲಿನ ಅಸೌಖ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಶಂಕಿತ ಇಲಿ ಜ್ವರದಿಂದ ಮೃತಪಟ್ಟ ಘಟನೆ ಸೆ. 1ರ ರಾತ್ರಿ ಸಂಭವಿಸಿದೆ.

Advertisement

ಕನಕಮಜಲು ಗ್ರಾಮದ ಆನೆಗುಂಡಿ ಸಿಆರ್‌ಸಿ ತಮಿಳು ಕಾಲನಿಯ ಸಿದ್ಧಯ್ಯ ಅವರ ಪುತ್ರ ಯುವರಾಜ್‌ (36) ಮೃತರು. ರಬ್ಬರ್‌ ಟ್ಯಾಪಿಂಗ್‌ ಕಾರ್ಮಿಕರಾಗಿದ್ದ ಯುವರಾಜ್‌ ಅವರನ್ನು ವಾರದ ಹಿಂದೆ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಗುಣಮುಖರಾಗದ ಹಿನ್ನೆಲೆಯಲ್ಲಿ ಆ. 30ರಂದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ನಡೆಸಿದ ರಕ್ತ ಪರೀಕ್ಷೆ ವೇಳೆ ಇಲಿ ಜ್ವರ ದೃಢಪಟ್ಟಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಫ‌ಲಕಾರಿಯಾಗದೆ ಸೆ. 1ರ ರಾತ್ರಿ ಮೃತಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next