Advertisement

ಬೆಂಗಳೂರು:ಮತ್ತೊಬ್ಬ ಶಂಕಿತ ಜೆಎಂಬಿ ಉಗ್ರನ ಬಂಧನ 

02:07 PM Aug 09, 2018 | |

ಬೆಂಗಳೂರು: ನಗರದಲ್ಲಿ ಮತ್ತೋರ್ವ ಶಂಕಿತ ಜಮಾತ್‌-ಉಲ್‌- ಮುಜಾಹಿದ್ದೀನ್‌ ಬಾಂಗ್ಲಾದೇಶ್‌ ಉಗ್ರ ಸಂಘಟನೆಯ ಶಂಕಿತನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. 

Advertisement

ಬಂಧಿತ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಅಸಾದುಲ್ಲಾ  ಅಲಿಯಾಸ್‌ ಆದಿಲ್‌ (29) ಎಂದು ತಿಳಿದು ಬಂದಿದೆ. 

ರಾಮನಗರದಲ್ಲಿ  ಸೋಮವಾರ  ಬಂಧನಕ್ಕೊಳಗಾಗಿದ್ದ ಮುನೀರ್‌ ಶೇಕ್‌ ಅಲಿಯಾಸ್‌ ಕೌಸರ್‌ ನನ್ನು  ವಿಚಾರಣೆ ನಡೆಸಿದಾಗ ಈತನ ಬಗ್ಗೆ  ಬಾಯ್‌ ಬಿಟ್ಟಿದ್ದು  ಆ ಬಳಿಕ ಎನ್‌ಐಎ ಹಾಗೂ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸಿವೆ. 

ಮುನೀರ್‌ ಶೇಖ್‌ ಬಿಹಾರದ ಬೋಧ್‌ಗಯಾ ಸ್ಫೋಟಕ್ಕೆ ಸಂಚು ನಡೆಸಿದ್ದು, ಅಲ್ಲಿಗೆ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸಿದ್ದ ಹಾಗೂ ರಾಷ್ಟ್ರದ ಹಲವು ಕಡೆಗಳಲ್ಲಿ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿತ್ತು. ಈತನೂ ಆತನ ಉಗ್ರ ಚಟುವಟಿಕೆಗಳಲ್ಲಿ ಸಹಕಾರಿಯಾಗಿದ್ದ ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next