Advertisement

ಅನುಮಾನಸ್ಪದ ವಸ್ತು ಸ್ಫೋಟ: ಶಾಸಕ ಹ್ಯಾರೀಸ್‌ ಸೇರಿ ಹಲವರಿಗೆ ಗಾಯ

09:25 AM Jan 23, 2020 | Team Udayavani |

ಬೆಂಗಳೂರು:ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಅನುಮಾನಸ್ಪದ ವಸ್ತು ಸ್ಫೋಟಗೊಂಡು ಶಾಂತಿನಗರ ಶಾಸಕ ಎನ್‌.ಎ ಹ್ಯಾರೀಸ್‌ ಸೇರಿದಂತೆ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ.

Advertisement

ಶಾಂತಿನಗರದ ಹೊನ್ನಾರ ಪೇಟೆಯಲ್ಲಿ ಬುಧವಾರ ರಾತ್ರಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡಿರುವ ಶಾಸಕ ಹ್ಯಾರಿಸ್‌ ಸೇರಿ ಇತರರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ ಹ್ಯಾರೀಸ್‌ ವೇದಿಕೆಯ ಕೆಳಭಾಗ ಕುಳಿತಿದ್ದರು ಈ ವೇಳೆ ವಸ್ತು ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.

ಸ್ಫೋಟಗೊಂಡ ವಸ್ತು ಯಾವುದು ಎಂಬುದು ಖಚಿತಪಟ್ಟಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನಾ ಸ್ಥಳದಲ್ಲಿನ ಚೂರುಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next