Advertisement

Puttur ಮೀಟರ್‌ ಬಡ್ಡಿ ಕಿರುಕುಳ ಶಂಕೆ; ಮಹಿಳೆ ಆತ್ಮಹತ್ಯೆ

01:27 AM Jan 07, 2024 | Team Udayavani |

ಪುತ್ತೂರು: ಹಣದ ವ್ಯವಹಾರದ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಲ್ನಾಡು ನಿವಾಸಿ ಕೇಸರಿ (41) ಜ. 6ರಂದು ಮೃತಪಟ್ಟಿದ್ದಾರೆ.

Advertisement

ಜ. 5 ರಂದು ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಂತಾಜನಕ ಸ್ಥಿತಿಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಶನಿವಾರ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮನೆಯ ದಾಖಲೆಯನ್ನು ಇಟ್ಟುಕೊಂಡು ಬಡ್ಡಿಗೆ ಹಣ ಕೊಟ್ಟವರು ಕಿರುಕುಳ ಪ್ರಾರಂಭಿಸಿದ್ದರೆಂದು ಆತ್ಮಹತ್ಯೆಗೆ ಯತ್ನಕ್ಕೂ ಮೊದಲು ಹಲವರಲ್ಲಿ ಕಣ್ಣೀರಿಟ್ಟು ಕೇಸರಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಸಾಲದೆ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next