Advertisement

ಪಾಕ್‌ಗೆ ಮುಖಭಂಗ: ಒಐಸಿ ಸಮ್ಮೇಳನದಲ್ಲಿ ಪಾಕ್‌ಗೆ ತಿವಿದ ಸುಷ್ಮಾ 

12:30 AM Mar 02, 2019 | Team Udayavani |

ಅಬುಧಾಬಿ: “ನಾವೆಲ್ಲರೂ ಮಾನವತೆಯನ್ನು ಉಳಿಸಲೇಬೇಕು ಎಂದಿದ್ದರೆ ಭಯೋತ್ಪಾದಕರಿಗೆ ಬೆಂಬಲ, ಹಣ ನೀಡುತ್ತಿರುವ ರಾಷ್ಟ್ರಗಳಿಗೆ ಯಾವುದೇ ಆಶ್ರಯ ನೀಡದಂತೆ ಸೂಚಿಸಬೇಕು…’

Advertisement

– ಇದು ಇಸ್ಲಾಂ ಸಹಕಾರ ಸಂಘಟನೆ (ಒಐಸಿ)ಯ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಸಚಿವೆ ಸುಷ್ಮಾ ಸ್ವರಾಜ್‌ ಅವರು ಪಾಕಿಸ್ಥಾನಕ್ಕೆ ಹೇಳಿದ ಖಡಕ್‌ ಮಾತು. ವಿಶೇಷವೆಂದರೆ ಈ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಪಾಕಿಸ್ಥಾನವೂ ಒಂದು. ವಿದೇಶಾಂಗ ಸಚಿವರು ಸಮ್ಮೇಳನಕ್ಕೆ ಬರುವಂತೆ ಭಾರತಕ್ಕೆ ನೀಡಿರುವ ವಿಶೇಷ ಗೌರವಾ ನ್ವಿತ ಆಹ್ವಾನ ವಾಪಸ್‌ ಪಡೆಯದಿದ್ದರೆ ಸಮ್ಮೇಳನಕ್ಕೆ ಬರುವುದೇ ಇಲ್ಲ ಎಂಬ ಪಾಕಿ ಸ್ಥಾನದ ಮೊಂಡಾಟವನ್ನು ನಿರ್ಲಕ್ಷಿ ಸಿರುವ ಒಐಸಿ, ಭಾರತಕ್ಕೆ ಕೆಂಪುಹಾಸು ನೀಡಿದೆ. ಈ ಮೂಲಕ ಇಸ್ಲಾಮಿಕ್‌ ಜಗತ್ತಿನಲ್ಲೂ ಪಾಕಿಸ್ಥಾನ ಏಕಾಂಗಿತನ ಅನುಭವಿಸುವಂತಾಗಿದೆ.

ಸಮ್ಮೇಳನದಲ್ಲಿ 17 ನಿಮಿಷಗಳ ಭಾಷಣ ಮಾಡಿದ ಸುಷ್ಮಾ, ಮಾತಿ ನುದ್ದಕ್ಕೂ ಪಾಕಿಸ್ಥಾನದ ಭಯೋ ತ್ಪಾದ ನೆಯ ಆಟೋಪದ ಬಗ್ಗೆ ತಿವಿ ದರು. ಆ ದೇಶದ ಹೆಸರೆತ್ತದೆ, ಯಾವುದೇ ಉಗ್ರ ಸಂಘಟನೆಗೂ ಆಶ್ರಯ, ಹಣಕಾಸಿನ ನೆರವು ನೀಡಬಾರದು ಎಂದರು. ಭಯೋತ್ಪಾದನೆಗೂ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ. ಉಗ್ರ ವಾದ ಮನುಕುಲವನ್ನು ಹಾಳು ಮಾಡು ತ್ತಿದೆ ಎಂದರು.  

ಪಾಕ್‌ಗೆ ತೀವ್ರ ಹಿನ್ನಡೆ
ಒಐಸಿ ಭಾರತಕ್ಕೆ ನೀಡಿದ್ದ ಆಹ್ವಾನ ರದ್ದು ಮಾಡಿಸಿದಲ್ಲಿ, ಈ ದೇಶ ಗಳು ತಮ್ಮೊಂದಿಗೆ ಇವೆ ಎಂದು ಜಗತ್ತಿಗೆ ತೋರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಬಹಿಷ್ಕಾರದ ಮಾತು ಗಳನ್ನಾಡಿದ್ದ ಪಾಕಿಸ್ಥಾನಕ್ಕೆ ಇಲ್ಲೂ ಬೆಲೆ ಸಿಕ್ಕಿಲ್ಲ. ಈ ನಡುವೆ ಆಪ್ತ ಚೀನವೂ ಪಾಕ್‌ಗೆ ನಿರೀಕ್ಷಿತ ಬೆಂಬಲ ನೀಡುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next