Advertisement

ಸುಶಾಂತ್ 5 ದಿನದಲ್ಲಿ 14 ಬಾರಿ ಸಿಮ್ ಬದಲಾಯಿಸಿದ್ದೇಕೆ? ಬಿಹಾರ ಪೊಲೀಸರಿಂದ ಸತ್ಯ ಬಯಲು

09:32 AM Aug 03, 2020 | Nagendra Trasi |

ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆ ನಡೆಸಲು ಬಿಹಾರ ಪೊಲೀಸರು ಬೆನ್ನತ್ತಿದ್ದು, ಇದರಿಂದಾಗಿ ಮುಂಬೈ ಮತ್ತು ಬಿಹಾರ ಪೊಲೀಸರ ನಡುವೆ ಜಿದ್ದಾಜಿದ್ದಿ ನಡೆಯತೊಡಗಿದೆ ಎಂದು ವರದಿ ತಿಳಿಸಿದೆ.

Advertisement

ಬಿಹಾರ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ನಟ ಸುಶಾಂತ್ ಸಿಂಗ್ ಜೂನ್ 9ರಿಂದ 13ರವರೆಗೆ 14 ಸಿಮ್ ಕಾರ್ಡ್ಸ್ ಬದಲಾಯಿಸಿರುವುದಾಗಿ ತಿಳಿದು ಬಂದಿದೆ. ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಕೆಕೆ ಸಿಂಗ್ ಅವರು ದೂರು ದಾಖಲಿಸಿದ್ದರು. ಇದರಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಹೆಸರನ್ನು ಉಲ್ಲೇಖಿಸಿದ್ದು, ನಂತರ ಬಿಹಾರ ಪೊಲೀಸರು ತನಿಖೆ ನಡೆಸಲು ಆರಂಭಿಸಿದ್ದರು.

ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ಉಡುಪಿ ಮೂಲದ ದಿಶಾ ಸಾಲಿಯಾನ್ ಆತ್ಮಹತ್ಯೆಯ ಹಿಂದಿನ ಕಾರಣ ಬಹುಶಃ ಸುಶಾಂತ್ ಗೆ ತಿಳಿದಿರಬಹುದು ಎಂದು ಶಂಕಿಸಿರುವ ವಿಶೇಷ ತನಿಖಾ ತಂಡ, ಈ ಹಿನ್ನೆಲೆಯಲ್ಲಿಯೇ ಸುಶಾಂತ್ ಹಲವು ಬಾರಿ ಮೊಬೈಲ್ ಸಂಖ್ಯೆ ಬದಲಾಯಿಸಲು ಕಾರಣವಾಗಿರಬಹುದು ಎಂದು ಹೇಳಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ದಿಶಾ ಸಾಲಿಯಾನ್ ಆತ್ಮಹತ್ಯೆಗೂ ಮುನ್ನ ಆಕೆ ಸುಶಾಂತ್ ಸಿಂಗ್ ಗೆ ಕರೆ ಮಾಡಿ ಕೆಲವು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಳು. ಈ ನಿಟ್ಟಿನಲ್ಲಿಯೇ ಸುಶಾಂತ್ ಅವರನ್ನು ಬೆದರಿಸಲು ಕಾರಣವಾಗಿತ್ತು ಹಾಗೂ ಹೆದರಿಕೆಯಿಂದ ಪದೇ, ಪದೇ ನಂಬರ್ ಬದಲಾಯಿಸುತ್ತಿದ್ದರು ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next