Advertisement

ಬರದ ವರ:ಕೃಷಿ ಹೊಂಡದಲ್ಲಿ ಭರಪೂರ ನೀರು! ರೋಣದಲ್ಲಿ ವಿಸ್ಮಯ 

12:12 PM Apr 08, 2017 | Team Udayavani |

ರೋಣ : ಬರದಿಂದ ಕಂಗೆಟ್ಟಿದ್ದ ತಾಲೂಕಿನ ಹಿರೇಕೊಪ್ಪದಲ್ಲಿ ವಿಸ್ಮಯವೊಂದು ಸಂಭವಿದೆ. ಹನಿ ನೀರಿಗೂ ತತ್ವಾರವಿರುವ ವೇಳೆ ಕೃಷಿ ಹೊಂಡದಲ್ಲಿ 7 ಅಡಿಗೂ ಹೆಚ್ಚು ನೀರು ಬಂದಿದ್ದು ಜನರ ಮುಖದಲ್ಲಿ ಮಂದಹಾಸ ಮೂಡಿದೆ.

Advertisement

ಶರಣಪ್ಪ ಬಳೂಟಗಿ ಅವರು ತೋಡಿದ ಕೃಷಿ ಹೊಂಡದಲ್ಲಿ 7 ಅಡಿಗಳಷ್ಟು ಜಲಧಾರೆ ಉಕ್ಕಿ ಬಂದಿದೆ. ಕೌತುಕವನ್ನು ವೀಕ್ಷಿಸಲು ಸುತ್ತಮುತ್ತಲಿನ ಸಾವಿರಾರು ಜನರು ಸ್ಥಳಕ್ಕಾಗಮಿಸುತ್ತಿದ್ದಾರೆ. 

ಶರಣಪ್ಪ ಮನೆಯವರು ನೀರಿಗೆ ಗಂಗಾಪೂಜೆ ನಡೆಸಿದ್ದಾರೆ. ನೀರನ್ನು ಸುತ್ತಮುತ್ತಲಿನ ಗ್ರಾಮದ ಜನರಿಗೆ ಕುಡಿಯುವ ನೀರಾಗಿ ಹಂಚಲು ಮನಸ್ಸು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next