Advertisement

ಸಿದ್ದರಾಮಯ್ಯ ಮಾಂಸ ಸೇವನೆ ವಿಚಾರ ಪ್ರಸ್ತಾಪಕ್ಕೆ ಚೀಟಿ ಕೊಟ್ಟು ನಿಲ್ಲಿಸಿದ ಸುರ್ಜೇವಾಲಾ

02:58 PM Aug 29, 2022 | Team Udayavani |

ಬೆಂಗಳೂರು:ಮಾಂಸ ಸೇವನೆಯ ವಿಚಾರವನ್ನು ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಪ್ರಸ್ತಾಪಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಚೀಟಿ ಕೊಟ್ಟು ನಿಲ್ಲಿಸಿದ ಘಟನೆ ನಡೆದಿದೆ.

Advertisement

ಜಂಟಿ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಸಿದ್ದರಾಮಯ್ಯ ಈ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ತಕ್ಷಣವೇ ಅಲರ್ಟ್ ಆದ ಡಿ.ಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲಾ ವಿಷಯದ ಹಾದಿ ತಪ್ಪಲಿದೆ‌ ಎಂಬ ಆತಂಕದಿಂದ ಎಚ್ಚರಿಕೆ ಸಂದೇಶ ರವಾನಿಸಿದರು.

ಇದನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಸುರ್ಜೇವಾಲಾ ಮುಖ ನೋಡಿದ ಡಿಕೆಶಿ, ತಕ್ಷಣವೇ ಸನ್ನೆ ಮಾಡಿದರು. ಆಗ ಚೀಟಿ ಬರೆದು ಸಿದ್ದರಾಮಯ್ಯಗೆ ನೀಡಿದರು. ಚೀಟಿ ನೋಡಿ ಮಾಂಸಾಹಾರ ಸೇವನೆ ವಿಚಾರವನ್ನ ನಿಲ್ಲಿಸಿ ಭಾಷಣ ಮುಗಿಸಿದರು.

‘ಎದ್ದೇಳು ಮಂಜುನಾಥಾ’ ಕೂಗಿಗೆ ಬಸವರಾಜ್ ಬೊಮ್ಮಾಯಿ ಎದ್ದೇಳುತ್ತಾರಾ? : ಕಾಂಗ್ರೆಸ್ ವ್ಯಂಗ್ಯ
ಜಗ್ಗೇಶ್ ಅವರ ‘ಎದ್ದೇಳು ಮಂಜುನಾಥಾ’ ಕೂಗಿಗೆ ಬಸವರಾಜ್ ಬೊಮ್ಮಾಯಿ ಎದ್ದೇಳುತ್ತಾರಾ? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ತಮ್ಮ ಮನೆ ನೀರಿನಲ್ಲಿ ಮುಳುಗಿರುವ ಬಗ್ಗೆ ಜಗ್ಗೇಶ್ ಮಾಡಿದ ಟ್ವೀಟ್ ನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಬಿಜೆಪಿ ರಾಜ್ಯಸಭಾ ಸಂಸದರು ಪ್ರವಾಹದಿಂದ ತಮಗೆ ಆಗುತ್ತಿರುವ ತೊಂದರೆ ಬಗೆಹರಿಸಿ ಎಂದು ಮನವಿ ಸಲ್ಲಿಸುತ್ತಾರೆ ಎಂದರೆ ಈ 40% ಸರ್ಕಾರದ ಪ್ರವಾಹದ ನಿರ್ವಹಣೆ ಹೇಗಿದೆ ಎಂಬುದು ಅರಿವಾಗುತ್ತದೆ.ಸಂಸದರಿಗೆ ಹೀಗಾದರೆ ಇನ್ನು ಜನಸಾಮಾನ್ಯರ ಗತಿ ? ಜಗ್ಗೇಶ್ ಅವರ ‘ಎದ್ದೇಳು ಮಂಜುನಾಥಾ’ ಕೂಗಿಗೆ ಬಸವರಾಜ್ ಬೊಮ್ಮಾಯಿ ಎದ್ದೇಳುತ್ತಾರಾ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಸರಕಾರದ ಕಾಲೆಳೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next