ಅಮೇಥಿ : ಅಮೇಥಿಯಲ್ಲಿನ ಬಿಜೆಪಿ ಬೆಂಬಲಿಗ ಸುರೇಂದ್ರ ಸಿಂಗ್ ಹತ್ಯೆಯು ರಾಜಕೀಯ ದ್ವೇಷದ ಫಲವಾಗಿದೆ ಎಂದು ಇಂದು ಸೋಮವಾರ ಮಹತ್ವದ ಬೆಳವಣಿಗೆಯಲ್ಲಿ ಇಲ್ಲಿನ ಮೂಲಗಳು ಹೇಳಿವೆ.
ಸುರೇಂದ್ರ ಸಿಂಗ್ ಅವರು ಈ ಹಿಂದೆ ಗ್ರಾಮ ಪ್ರಧಾನರಾಗಿದ್ದ ಕೆಲವೊಂದು ವಿವಾದಗಳಿದ್ದು ಆತನ ಹತ್ಯೆಗೆ ಇದುವೇ ನಿಜವಾದ ಕಾರಣ ಇದ್ದಿರಬಹುದು ಎಂದು ಶಂಕಿಸಲಾಗಿದೆ.
ಸುರೇಂದ್ರ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಮಚಂದ್ರ, ಧರ್ಮನಾಥ ಗುಪ್ತಾ ಮತ್ತು ನಸೀಂ ಎಂಬ ಮೂವರನ್ನು ಬಂಧಿಸಲಾಗಿದೆ. ಇದೇ ವೇಳೆ ಕ್ರೈಮ್ ಬ್ರ್ಯಾಂಚ್ ನವರು ಇಬ್ಬರು ಶೂಟರ್ಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಬಂಧಿತ ಆರೋಪಿ ರಾಮಚಂದ್ರ ಈ ಹಿಂದೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ.
ಪೊಲೀಸರು ಹೇಳಿರುವ ಪ್ರಕಾರ ಹತ ಸುರೇಂದ್ರ ಸಿಂಗ್ ಗೆ ಕೆಲವು ಗ್ರಾಮಸ್ಥರೊಂದಿಗೆ ಭೂವಿವಾದವಿತ್ತು. ಗ್ರಾಮ ಪಂಚಾಯತ್ ಮತ್ತು ಲೋಕಸಭಾ ಚುನಾವಣೆಯ ವೇಳೆ ಜಾಗವೊಂದರ ಬಗ್ಗೆ ಸುರೇಂದ್ರ ಸಿಂಗ್ ಮತ್ತು ಕೆಲವರ ನಡುವೆ ಜಗಳವೂ ನಡೆದಿತ್ತು.
ಈ ಕುರಿತ ವಿವರವನ್ನು ಎಫ್ಐಆರ್ ನಲ್ಲೂ ನಮೂದಿಸಲಾಗಿದೆ. ಪೊಲೀಸರು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.