Advertisement

ಸುರತ್ಕಲ್‌: ಬಸ್‌ಗಳ ಢಿಕ್ಕಿ… 30 ಮಂದಿಗೆ ಗಾಯ

10:26 PM May 12, 2023 | Team Udayavani |

ಸುರತ್ಕಲ್‌: ಇಲ್ಲಿನ ಮುಕ್ಕ ಜಂಕ್ಷನ್‌ನಲ್ಲಿ ಉಡುಪಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ಸಿನ ಚಕ್ರ ಪಂಕ್ಚರ್‌ ಆದ ಪರಿಣಾಮ ಕುಷ್ಟಗಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಢಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.

Advertisement

ಎರಡೂ ಬಸ್ಸಿನಲ್ಲಿದ್ದ ಸುಮಾರು ಮೂವತ್ತು ಮಂದಿಗೆ ಗಾಯವಾಗಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹಲವರು ಪ್ರಥಮ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಆ್ಯಂಬುಲೆನ್ಸ್‌ ಸೇವೆ ವಿಳಂಬ
ಅಪಘಾತ ನಡೆದ ಅನತಿ ದೂರದಲ್ಲಿ ಖಾಸಗಿ ಆಸ್ಪತ್ರೆ ಇದ್ದು, ಗಾಯಾಳುಗಳನ್ನು ಸಾಗಿಸಲು ಆ್ಯಂಬುಲೆನ್ಸ್‌ ಒದಗಿಸುವಂತೆ ಮನವಿ ಮಾಡಲಾಗಿತ್ತು. ಮೊದಲಿಗೆ ಚಾಲಕರು ಹೊರಗಡೆ ಹೋಗಿದ್ದಾರೆ ಎಂದರು. ಅನಂತರ ನಾವು ಆ್ಯಂಬುಲೆನ್ಸ್‌ ನೀಡಿ ನಾವೇ ಚಲಾಯಿಸಿಕೊಂಡು ಗಾಯಾಳುಗಳನ್ನು ಸಾಗಿಸುತ್ತೇವೆ ಎಂದು ಹೇಳಿದೆವು. ಆಗ ಆಸ್ಪತ್ರೆಯವರು ಬೇರೆ ಬೇರೆ ಕಾರಣವನ್ನು ನೀಡಿ ಆ್ಯಂಬುಲೆನ್ಸ್‌ ನೀಡಲು ನಿರಾಕರಿಸಿದರು. ಅರ್ಧ ಗಂಟೆಯ ಬಳಿಕ ಬೇರೆಡೆಯಿಂದ ಬಂದ ಆ್ಯಂಬುಲೆನ್ಸ್‌ ವಾಹನದ ಮೂಲಕ ಗಾಯಾಳುಗಳನ್ನು ಸಾಗಿಸಲಾಯಿತು ಎಂದು ಸಾರ್ವಜನಿಕರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next