Advertisement

ಸುರತ್ಕಲ್‌: ಮನೆಯಲ್ಲಿ ಅಗ್ನಿ ಅವಘಡ, ಲಕ್ಷಾಂತರ ಮೌಲ್ಯದ ಸೊತ್ತು ಸುಟ್ಟು ಕರಕಲು

10:31 PM Jan 18, 2023 | Team Udayavani |

ಸುರತ್ಕಲ್‌: ಸುರತ್ಕಲ್‌ ಸಮೀಪದ ಬಾಂಗ್ಲಾ ವಠಾರದಲ್ಲಿ ಉಮೇಶ ಆಚಾರ್ಯ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

Advertisement

ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ರಿಡ್ಜ್ ನಲ್ಲಿ ಬೆಂಕಿ ಕಾಣಿಸಿಕೊಂಡು ಮನೆಯ ಎಲ್ಲ ಕಡೆ ವ್ಯಾಪಿಸಿದೆ. ತತ್‌ಕ್ಷಣ ಸ್ಥಳೀಯ ಮನೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಗ್ನಿ ಶಾಮಕ ಆಗಮಿಸಿದಾಗ ಬಹುತೇಕ ಮನೆಯನ್ನು ಬೆಂಕಿ ಆವರಿಸಿಕೊಂಡಿತ್ತು.

ಬಟ್ಟೆ, ಪಾತ್ರೆ, ಟಿವಿ ಸಹಿತ ಎಲ್ಲ ಉಪಕರಣಗಳು ಸುಟ್ಟು ಹೋಗಿದ್ದು ಸ್ಥಳಕ್ಕೆ ಶಾಸಕ ಡಾ| ಭರತ್‌ ಶೆಟ್ಟಿ ವೈ., ಮೇಯರ್‌ ಜಯಾನಂದ ಅಂಚನ್‌, ಸ್ಥಳೀಯ ಮನಪಾ ಸದಸ್ಯ ವರುಣ್‌ ಚೌಟ, ಉಮೇಶ್‌ ದೇವಾಡಿಗ ಇಡ್ಯಾ, ಉಪತಹಶೀಲ್ದಾರ್‌ ನವೀನ್‌ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ: ಪೆರ್ಡೂರು: ಪತ್ನಿಗೆ ಚೂರಿಯಿಂದ ಇರಿದು ಕೊಲೆ ಯತ್ನ; ಗಂಡನ ವಿರುದ್ಧ ದೂರು ದಾಖಲು

Advertisement

Udayavani is now on Telegram. Click here to join our channel and stay updated with the latest news.

Next