Advertisement

Surathkal: ಜಂಕ್ಷನ್ ಅಭಿವೃದ್ಧಿ ಕಾರ್ಯ; ಕಾರು ಚಾಲಕರ ಅಸಹಕಾರ

01:00 PM Apr 21, 2023 | Team Udayavani |

ಸುರತ್ಕಲ್: ಜಂಕ್ಷನ್ ಅಭಿವೃದ್ಧಿ ಕಾರ್ಯ ಬರದಿಂದ ನಡೆಯುತ್ತಿದ್ದರೂ ಸಮೀಪದಲ್ಲಿ ಹೆದ್ದಾರಿಯಂಚಿನಲ್ಲಿ ಬೀಳು ಬಿಟ್ಟಿರುವ ಕಾರು ಚಾಲಕರ ಅಸಹಕಾರ ಎದ್ದು ಕಾಣುತ್ತಿದೆ.

Advertisement

ಈ ಹಿಂದೆ ಸುರತ್ಕಲ್ ಪೇಟೆ ಕಿರಿದಾಗಿದ್ದ ಸಂದರ್ಭ ಕಾರು ಚಾಲಕರು ಕೆನರಾ ಬ್ಯಾಂಕ್ ಮುಂಭಾಗದ ಮರದ ಕೆಳಗೆ ತಮ್ಮ ವಾಹನ ನಿಲ್ಲಿಸಿ ಬಾಡಿಗೆ ನಡೆಸುತ್ತಿದ್ದರು.

ಇದೀಗ ಎಂ.ಆರ್.ಪಿ.ಎಲ್., ಎಚ್.ಪಿ.ಸಿ.ಎಲ್. ಸಹಿತ  ಕಂಪನಿಗಳು ಸ್ಥಾಪನೆಯಾದ ಬಳಿಕ ಸಾವಿರಾರು ಟ್ಯಾಂಕರ್ ಗಳು ವಾಹನಗಳ ಓಡಾಟ ಹೆಚ್ಚಾಗಿದ್ದು, ರಸ್ತೆ ಅಗಲೀಕರಣವು ಅನಿವಾರ್ಯವಾಗಿದೆ.

ಇದೀಗ ಜಂಕ್ಷನ್ ಅಭಿವೃದ್ಧಿಯಾದ ಬಳಿಕ ಬಾಡಿಗೆ ಕಾರುಗಳ ನಿಲ್ದಾಣಕ್ಕೆ ಪರ್ಯಾಯ ಸ್ಥಳ ಹುಡುಕುವುದು ಅನಿವಾರ್ಯವಾಗಿದೆ. ಇದೀಗ ಕಾಮಗಾರಿ ನಡೆಯುತ್ತಿದ್ದರೂ ಮೇಲ್ಸೇತುವೆ ಕೆಳಭಾಗದಲ್ಲಿ ವಾಹನ ಇಟ್ಟು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next