Advertisement

ಸುರತ್ಕಲ್‌: ಫಾಝಿಲ್‌ ಹತ್ಯೆ ಪ್ರಕರಣ, ತನಿಖೆ ಚುರುಕು

06:34 PM Aug 03, 2022 | Team Udayavani |

ಸುರತ್ಕಲ್‌: ಸುರತ್ಕಲ್‌ ತಾತ್ಕಾಲಿಕ ಮಾರುಕಟ್ಟೆ ಬಳಿ ಜು.28ರಂದು ನಡೆದ ಫಾಝಿಲ್‌ ಹತ್ಯೆ ಪ್ರಕರಣ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.

Advertisement

ಬುಧವಾರ ಸ್ಥಳ ಮಹಜರು ನಡೆಸಲು ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಘಟನಾ ಸ್ಥಳಕ್ಕೆ ಕರೆತರಲಾಗಿತ್ತು. ನಡೆದ ಘಟನೆಯನ್ನು ಆರೋಪಿಗಳು ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಪ್ರತೀ ಸಾಕ್ಷéಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬುಧವಾರವೂ ರಾತ್ರಿ ಕರ್ಫ್ಯೂ ಹೇರಿದ್ದರಿಂದ ಸುರತ್ಕಲ್‌ ,ಕೃಷ್ಣಾಪುರ, ಕಾಟಿಪಳ್ಳ ಸಹಿತ ಪ್ರಮುಖ ಪ್ರದೇಶದಲ್ಲಿ ವ್ಯಾಪಾರ ವಹಿವಾಟು 6 ಗಂಟೆಗೆ ಸ್ಥಗಿತಗೊಳಿಸಿ ಆಂಗಡಿ ಮುಗ್ಗಟ್ಟು ಬಂದ್‌ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next