Advertisement

Surathkal: ಹದೆಗೆಟ್ಟ ಸೇತುವೆಗಳ ಶಾಶ್ವತ ದುರಸ್ತಿಗೆ ಸಿಗಲಿ ಚಾಲನೆ

04:32 PM Sep 03, 2024 | Team Udayavani |

ಸುರತ್ಕಲ್‌: ಸುರತ್ಕಲ್‌ ಹಾಗೂ ವಿದ್ಯಾನಗರ ರೈಲ್ವೇ ಮೇಲ್ಸೆತುವೆ ಇಲ್ಲಿನ ಜನತೆಗೆ ಶಾಪ ಎಂಬಂತೆ ಸಾರ್ವಜನಿಕರ ಅನ್ನಿಸಿತೊಡಗಿದೆ. ಹಾಕಿದ ಡಾಮರು ಮಳೆ ಪಾಲಾಗಿ ಇಂದು ಹೊಂಡ ಮಾತ್ರ ಉಳಿದಿದೆ.

Advertisement

ಸುರತ್ಕಲ್‌ ಕಷ್ಣಾಪುರ, ಕಾನಾ ಬಾಳ ಗ್ರಾಮದ ವರಿಗೆ ಪ್ರತೀ ನಿತ್ಯ ಓಡಾಡುವ ಮಂದಿಗೆ ಈ ಸೇತುವೆ ದಾಟಿಯೇ ಹೋಗಬೇಕು. ನಿತ್ಯ ಸೇತುವೆಯ ಇಕ್ಕೆಲಗಳಲ್ಲಿ ವಾಹನಗಳ ಸಾಲುಗಳ ಕಂಡು ಬರುತ್ತವೆ. ಜತೆಗೆ ರೋರೋ ಲಾರಿಗಳ ಓಡಾಟ, ಟ್ಯಾಂಕರ್‌ಗಳ ಸಾಲು ಸಾಲು ಓಡಾಟ ಈ ಸೇತುವೆಯನ್ನು ಮತ್ತಷ್ಟು ಕುಲಗೆಡಿಸಿದೆ. ಸೇತುವೆಯ ಇಕ್ಕೆಲಗಳಲ್ಲಿ ಪಾಲಿಕೆ ಕಾಂಕ್ರೀಟ್‌ ಹಾಕಿ ತನ್ನ ಕರ್ತವ್ಯ ಮೆರೆದಿದೆ. ಇತ್ತೀಚೆಗೆ ಕೊಂಕಣ ರೈಲ್ವೇ ಇಲಾಖೆ ಸೇತುವೆ ಮೇಲ್ಭಾಗ ಶಾಶ್ವತ ದುರಸ್ತಿಗೆ ಪಾಲಿಕೆಗೆ ಅನುಮತಿ ನೀಡಿದ್ದು ಶೀಘ್ರ ಶಾಶ್ವತ ಕಾಮಗರಿಗೆ ಮುಂದಾಗಬೇಕೆಂದು ಜನರ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next