Advertisement

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

12:06 AM Sep 17, 2024 | Team Udayavani |

ಸುರತ್ಕಲ್‌: ಸುರತ್ಕಲ್‌ ಮೆಡಿಕಲ್‌ ಕಾಲೇಜೊಂದರ ವಿದ್ಯಾರ್ಥಿ, ಸುರತ್ಕಲ್‌ ಪ್ರಗತಿನಗರದ ನಿವಾಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ದೇಹ ಕೊಳೆತ ಸ್ಥಿತಿಯಲ್ಲಿ ಸುರತ್ಕಲ್‌ ಬಳಿಯ ಪ್ರಗತಿನಗರ ಬಡಾವಣೆಯಲ್ಲಿ ಪತ್ತೆಯಾಗಿದೆ.

Advertisement

ಚಿಕ್ಕಬಳ್ಳಾಪುರ ಮೂಲದ ಮೋಹನ್‌ ಕುಮಾರ್‌ ಮೇಟಿ (22) ಮೃತಪಟ್ಟ ವಿದ್ಯಾರ್ಥಿ. ಕಳೆದ ಗುರುವಾರ ಈತನ ತಾಯಿ ದೂರವಾಣಿ ಕರೆ ಮಾಡಿದ್ದರು. ಪದೇ ಪದೆ ಮಾಡಿದರೂ ಕರೆ ಸ್ವೀಕರಿಸದೆ ಇದ್ದಾಗ ಗಾಬರಿಗೊಂಡ ಅವರು ಬಾಡಿಗೆ ಮನೆ ಮಾಲಕರಿಗೆ ಮಗ ಮೊಬೈಲ್‌ ತೆಗೆಯುತ್ತಿಲ್ಲ ಒಮ್ಮೆ ನೋಡಿ ಬನ್ನಿ ಎಂದು ಹೇಳಿದ್ದಾರೆ. ಅದರಂತೆ ಮನೆಯ ಕಡೆ ಬಂದು ಪರಿಶೀಲಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ದೇಹ ಬಹುತೇಕ ಕೊಳೆತು ಹೋಗಿತ್ತು.

ಸೋಮವಾರ ವಿದ್ಯಾರ್ಥಿಯ ಪೋಷಕರು ಆಗಮಿಸಿ ಕಾನೂನು ರೀತಿಯ ಪ್ರಕ್ರಿಯೆ ಮುಗಿಸಿ ಮೃತದೇಹವನ್ನು ಊರಿಗೆ ಕೊಂಡೊಯ್ದರು. ಸುರತ್ಕಲ್‌ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next