Advertisement

Surathkal: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ವಿದ್ಯಾರ್ಥಿನಿಯರಿಬ್ಬರು ಗಂಭೀರ

12:05 AM Dec 12, 2023 | Team Udayavani |

ಸುರತ್ಕಲ್:‌ ಹೆದ್ದಾರಿ ದಾಟಲು ಯತ್ನಿಸುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡ ಘಟನೆ ಸುರತ್ಕಲ್‌ ಜಂಕ್ಷನ್‌ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

Advertisement

ಸ್ಥಳೀಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅಲೈಡ್‌ ಸೈನ್ಸ್‌ ವಿಭಾಗದ 2ನೇ ವರ್ಷದ ವಿದ್ಯಾರ್ಥಿಗಳಾದ ಕೇರಳ ರಾಜ್ಯದ ಕಾಸರಗೋಡು ಮೂಲದವರಾದ ಭಾವನಾ (19) ಮತ್ತು ಮಯೂರಿ (20) ಗಂಭೀರ ಗಾಯಗೊಂಡವರು.

ಸೋಮವಾರ ಬೆಳಗ್ಗೆ ಎಂದಿನಂತೆ ಪಿಜಿಯಿಂದ ಕಾಲೇಜಿಗೆ ಹೋಗಲು ಸುರತ್ಕಲ್‌ ನಟರಾಜ್‌ ಟಾಕೀಸ್‌ ಸಮೀಪದ ಬಸ್‌ ನಿಲ್ದಾಣದ ಬಳಿ ಹೆದ್ದಾರಿಯಲ್ಲಿ ದಾಟಲು ಯತ್ನಿಸಿದ ವೇಳೆ ಒನ್‌ ವೇಯಲ್ಲಿ ಬಂದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ವಿದ್ಯಾರ್ಥಿನಿಯರು ಎಗರಿ ಬಿದ್ದಿದ್ದು ತಲೆ, ಕೈ, ಕಾಲುಗಳಿಗೆ ಗಂಭೀರ ಏಟಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ತತ್‌ಕ್ಷಣ ಸುತ್ತಮುತ್ತಲಿನ ಅಂಗಡಿಯವರು, ಬಾಡಿಗೆ ವಾಹನದ ಚಾಲಕರು ನೆರವಿಗೆ ಬಂದು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು. ಇಬ್ಬರೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಳಾಯಿ ಬಳಿ ಅಪಘಾತ; ಮಹಿಳೆ ಸಾವು
ಕುಳಾಯಿಯ ಶೆಟ್ಟಿ ಐಸ್‌ ಕ್ರೀಂ ಬಳಿಯಲ್ಲಿ ಹೆದ್ದಾರಿ ದಾಟುತ್ತಿದ್ದ ಉತ್ತರ ಕರ್ನಾಟಕ ಮೂಲದ ಮಹಿಳೆಯೊಬ್ಬರು ವಾಹನ ಢಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಗದಗ ಮೂಲದ ಗಂಗವ್ವ (45)ಮೃತಪಟ್ಟವರು. ಸ್ಥಳೀಯ ಶಾಪ್‌ ಒಂದರಲ್ಲಿ ಸ್ವಚ್ಛತೆ ಮುಗಿಸಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next