Advertisement

ಸೆ.12ರಿಂದ ಸಿಎಎ ಮೇಲ್ಮನವಿಗಳ ವಿಚಾರಣೆ

08:15 PM Sep 08, 2022 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆಗೆ ಆಕ್ಷೇಪ ಮಾಡಿ ಸಲ್ಲಿಕೆ ಮಾಡಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಸೆ.12ರಂದು ಕೈಗೆತ್ತಿಕೊಳ್ಳಲಿದೆ.

Advertisement

ಕೇಂದ್ರ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನೆ ಮಾಡಿ 200ಕ್ಕೂ ಅಧಿಕ ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ. ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ಮತ್ತು ನ್ಯಾ.ರವೀಂದ್ರ ಭಟ್‌ ನೇತೃತ್ವದ ನ್ಯಾಯಪೀಠ ಅವುಗಳನ್ನು ಪರಿಶೀಲಿಸಲಿದೆ.

2020ರ ಜನವರಿಯಲ್ಲಿ ಆಗ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್‌.ಎ.ಬೋಬ್ಡೆ ಅವರು ಅರ್ಜಿಗಳನ್ನು ಅಂಗೀಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next