Advertisement

ಮೀಸಲಾತಿ: ಹೈಕೋರ್ಟ್‌ ಆದೇಶ ರದ್ದುಗೊಳಿಸಿದ “ಸುಪ್ರೀಂ’

07:31 PM Feb 17, 2022 | Team Udayavani |

ಚಂಡೀಗಡ: ಹರ್ಯಾಣ ರಾಜ್ಯದ ಖಾಸಗಿ ಕಂಪನಿಗಳು ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಆದೇಶಕ್ಕೆ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ.

Advertisement

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಗಳಲ್ಲಿ ಹರ್ಯಾಣದ ನಾಗರಿಕರಿಗೆ ಶೇ. 75ರವರೆಗೆ ಮೀಸಲಾತಿ ನೀಡಬೇಕೆಂದು ಅಲ್ಲಿನ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದಕ್ಕೆ ರಾಜ್ಯ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದನ್ನು ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠ, ತಡೆಯಾಜ್ಞೆಗೆ ಪೂರಕವಾದ ಅಂಶಗಳನ್ನು ಹೈಕೋರ್ಟ್‌ ಉಲ್ಲೇಖೀಸಿಲ್ಲ ಎಂದು ಹೇಳಿತು.

ಅಲ್ಲದೆ, ಹರ್ಯಾಣದ ಪರವಾಗಿ ವಾದ ಮಂಡಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಇದೇ ರೀತಿಯ ಮೀಸಲಾತಿಯನ್ನು ಈಗಾಗಲೇ ಆಂಧ್ರಪ್ರದೇಶ, ಜಾರ್ಖಂಡ್‌, ಮಹಾರಾಷ್ಟ್ರ ಸರ್ಕಾರಗಳು ಜಾರಿಗೊಳಿಸಿವೆ ಎಂದು ಹೇಳಿದ್ದನ್ನು ನ್ಯಾಯಪೀಠ ಪರಿಗಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next