Advertisement

ಕೋವಿಡ್ ಪರಿಹಾರ ತ್ವರಿತವಾಗಿ ನೀಡಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ 

06:50 PM Jul 18, 2022 | Team Udayavani |

ನವದೆಹಲಿ: ಕೋವಿಡ್ ದಿಂದ ಮೃತಪಟ್ಟ ದುರ್ದೈವಿಗಳ ಸಂಬಂಧಿಕರಿಗೆ ಪರಿಹಾರ ನೀಡುವಿಕೆಯಲ್ಲಿ ಯಾವುದೇ ವಿಳಂಬ ಧೋರಣೆ ಅನುಸರಿಸಬಾರದು. ಕಾಲಹರಣ ಮಾಡದಂತೆ ಇಂಥ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು ಎಂದು ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

Advertisement

ಹಾಗೊಂದು ವೇಳೆ, ದುರ್ದೈವಿಗಳ ಸಂಬಂಧಿಕರಿಗೆ ಪರಿಹಾರ ತಲುಪುವುದು ತಡವಾದರೆ ಅಥವಾ ಪರಿಹಾರಕ್ಕಾಗಿ ಅವರು ಸಲ್ಲಿಸಿದ ಅರ್ಜಿಯು ತಿರಸ್ಕೃತಗೊಂಡರೆ, ಅಂಥವರು ಆಯಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಕುಂದುಕೊರತೆಗಳ ಸಮಿತಿಯ ಮೊರೆ ಹೋಗಬಹುದು ಎಂದು ನ್ಯಾಯಮೂರ್ತಿಗಳಾದ ಎಂ.ಆರ್‌. ಶಾ ಹಾಗೂ ಬಿ.ವಿ. ನಾಗರತ್ನ ಅವರುಳ್ಳ ನ್ಯಾಯಪೀಠ ಹೇಳಿದೆ.

ಅಲ್ಲದೆ, ಅರ್ಜಿದಾರರು ಕುಂದುಕೊರತೆಗಳ ಸಮಿತಿಯ ಮೊರೆ ಹೋದರೆ ಅಂಥ ಅರ್ಜಿಗಳನ್ನು ಸಮಿತಿಯು ನಾಲ್ಕು ವಾರಗಳೊಳಗೆ ಇತ್ಯರ್ಥಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾಯಪೀಠ ಸೂಚಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next