Advertisement

ಭದ್ರತಾ ಠೇವಣಿ ವಾಪಸ್‌ಗೆ ಕಾರ್ತಿ ಚಿದಂಬರಂಗೆ ಅಸ್ತು

10:08 AM Jan 18, 2020 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ಇರಿಸಿದ್ದ 20 ಕೋಟಿ ರೂ. ಭದ್ರತಾ ಠೇವಣಿಯನ್ನು ಹಿಂಪಡೆದುಕೊಳ್ಳಲು ಸುಪ್ರೀಂಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. 2019ರ ಜನವರಿ ಮತ್ತು ಮೇನಲ್ಲಿ ವಿದೇಶ ಪ್ರವಾಸ ಕೈಗೊಳ್ಳಲು ಕಾರ್ತಿಗೆ ಕೋರ್ಟ್‌ ಅನುಮತಿ ನೀಡಿತ್ತು. ಆದರೆ, 20 ಕೋಟಿ ರೂ. ಭದ್ರತಾ ಠೇವಣಿ ಇಡುವಂತೆ ಸೂಚಿಸಿತ್ತು.

Advertisement

ಶುಕ್ರವಾರ ವಿಚಾರಣೆ ವೇಳೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಠೇವಣಿ ಹಿಂಪಡೆಯಲು ಆಕ್ಷೇಪವಿಲ್ಲ ಎಂದರು. ಹೀಗಾಗಿ, ಕಾರ್ತಿಗೆ ಅದನ್ನು ವಾಪಸ್‌ ಪಡಕೊಳ್ಳಲು ನ್ಯಾಯಪೀಠ ಅನುಮತಿ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next