Advertisement

ಅಯ್ಯಪ್ಪನ ಆಭರಣ ಮೌಲ್ಯಮಾಪನಕ್ಕೆ ಸಮಿತಿ

10:07 AM Feb 09, 2020 | Hari Prasad |

ಹೊಸದಿಲ್ಲಿ: ಶಬರಿಮಲೆ ಅಯ್ಯಪ್ಪ ದೇಗುಲದ ಆಭರಣಗಳ ವಿವರ ಮತ್ತು ಮೌಲ್ಯಮಾಪನ ನಡೆಸಲು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸಿ.ಎನ್‌.ರಾಮಚಂದ್ರನ್‌ ಅವರನ್ನು ನೇಮಿಸಿದೆ. ನ್ಯಾ.ರಾಮಚಂದ್ರನ್‌ ಕೇರಳ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದರು.

Advertisement

ಆಭರಣಗಳ ವಿವರ ಮತ್ತು ಮೌಲ್ಯಮಾಪನಕ್ಕಾಗಿ ಚಿನ್ನಾಭರಣ ಕ್ಷೇತ್ರದಲ್ಲಿ ಪರಿಣತ ವ್ಯಕ್ತಿ ಅಥವಾ ಮೌಲ್ಯಮಾಪಕರೊಬ್ಬರ ನೆರವು ಪಡೆದುಕೊಳ್ಳಬಹುದೆಂದು ನ್ಯಾಯಪೀಠ ಆದೇಶ ನೀಡಿದೆ.

ಪಂದಳಂ ರಾಜಕುಟುಂಬದ ರಾಜ, ರಾಜವರ್ಮ ಕುಟುಂಬದ ವಶದಲ್ಲಿರುವ ಅಯ್ಯಪ್ಪ ಸ್ವಾಮಿಯ ಆಭರಣಗಳ ಬಗ್ಗೆ ಮೌಲ್ಯಮಾಪನ ನಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು. ಜತೆಗೆ ಕೇರಳ ಸರಕಾರಕ್ಕೆ ದೇವಸ್ಥಾನ ಆಡಳಿತ ನಿರ್ವಹಣೆ ಬಗ್ಗೆ ಕರಡು ಕಾಯ್ದೆ ಸಿದ್ಧಪಡಿಸಲು 1 ತಿಂಗಳ ಅವಕಾಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next