Advertisement

ಫುಟ್ ಬಾಲ್‌ ಅಮಾನತು ತೆರವಿಗೆ ಸುಪ್ರೀಂ ಕೋರ್ಟ್‌ ಸೂಚನೆ

10:29 PM Aug 17, 2022 | Team Udayavani |

ಹೊಸದಿಲ್ಲಿ: ಭಾರತೀಯ ಫುಟ್ ಬಾಲ್‌ ಫೆಡರೇಷನ್‌ಗೆ ಫಿಫಾ ವಿಧಿಸಿದ ಅಮಾನತು ತೆರವುಗೊಳಿಸಲು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ. ಇದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಆ. 22ಕ್ಕೆ ಮುಂದೂಡಿದೆ.

Advertisement

ಕೇಂದ್ರ ಸರಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಿಚಾರಣೆಗೆ ಹಾಜರಾಗಿದ್ದರು. ಇವರ ಕೋರಿಕೆಯ ಮೇರೆಗೆ ವನಿತೆಯರ ಅಂಡರ್‌-17 ವಿಶ್ವಕಪ್‌ ಆಯೋಜಿಸಲು ಫಿಫಾ ವಿಧಿಸಿರುವ ಅಮಾನತು ತೆರವುಗೊಳಿಸಲು ಸಕ್ರಿಯ ಪಾತ್ರ ವಹಿಸುವಂತೆ ಕೇಂದ್ರಕ್ಕೆ ಸೂಚಿಸಿದರು.

ವನಿತೆಯರ ಅಂಡರ್‌-17 ವಿಶ್ವಕಪ್‌ ಪಂದ್ಯಾವಳಿಯಿಂದ ಭಾರತೀಯ ಫುಟ್ ಬಾಲ್‌ಗೆ ಪ್ರಯೋಜನವಾಗಲಿದೆ ಎಂದು ಸುಪ್ರೀಂ ಕೋರ್ಟ್‌ ಉಲ್ಲೇಖಿಸಿದೆ.

ಅಮಾನತು ತೆರವು ಮತ್ತು ವಿವಾದ ಪರಿಹರಿಸಲು ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಕುರಿತು ಕೇಂದ್ರವು ಮಂಗಳವಾರವೇ ಫಿಫಾ ಜತೆ ಎರಡು ಸುತ್ತಿನ ಮಾತುಕತೆ ನಡೆಸಿದೆ ಎಂಬುದಾಗಿ ತುಷಾರ್‌ ಮೆಹ್ತಾ ತಿಳಿಸಿದರು. ಭಾರತೀಯ ಫುಟ್ ಬಾಲ್‌ ಫೆಡರೇಶನ್‌ನಲ್ಲಿ ತೃತೀಯ ವ್ಯಕ್ತಿಯ ಮಿತಿಮೀರಿದ ಹಸ್ತಕ್ಷೇಪ ಕಂಡುಬಂದುದರಿಂದ ಫಿಫಾ ಈ ಕ್ರಮಕ್ಕೆ ಮುಂದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next