Advertisement

ಅಲ್ಪಸಂಖ್ಯಾತ ಸ್ಥಾನಮಾನ: ಸ್ಮಾರ್ತ ಬ್ರಾಹ್ಮಣರ ಅರ್ಜಿ ತಿರಸ್ಕೃತ

07:16 PM Oct 17, 2022 | Team Udayavani |

ನವದೆಹಲಿ: ಅಲ್ಪಸಂಖ್ಯಾತ ಸ್ಥಾನಮಾನ ಒದಗಿಸುವಂತೆ ಕೋರಿ ತಮಿಳುನಾಡಿನಲ್ಲಿ ವಾಸವಿರುವ, ಅದ್ವೈತ ಸಿದ್ಧಾಂತವನ್ನು ಅನುಸರಿಸುವ ಸ್ಮಾರ್ತ ಬ್ರಾಹ್ಮಣರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿದೆ.

Advertisement

ಸ್ಮಾರ್ತ ಬ್ರಾಹ್ಮಣ ಎನ್ನುವುದು ಧಾರ್ಮಿಕ ಪಂಗಡವಲ್ಲದ ಕಾರಣ, ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಗದು ಎಂದು ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ನ ನ್ಯಾ.ಕೃಷ್ಣ ಮುರಾರಿ ಮತ್ತು ನ್ಯಾ.ಎಸ್‌.ರವೀಂದ್ರ ಭಟ್‌ ಅವರನ್ನೊಳಗೊಂಡ ಪೀಠ ಎತ್ತಿಹಿಡಿದಿದೆ.

ಜತೆಗೆ, “ಅದ್ವೈತ ಸಿದ್ಧಾಂತವನ್ನು ಹಲವರು ಅನುಸರಿಸುತ್ತಾರೆ. ಹಾಗಂತ ಎಲ್ಲರಿಗೂ ಅಲ್ಪಸಂಖ್ಯಾತ ಸ್ಥಾನಮಾನ ನೀಡುತ್ತಾ ಹೋದರೆ, ನಾವು ಅಲ್ಪಸಂಖ್ಯಾತರ ದೇಶವನ್ನು ಹೊಂದಬೇಕಾಗುತ್ತದೆ’ ಎಂದೂ ಹೇಳಿದೆ.

ಸ್ಮಾರ್ತ ಬ್ರಾಹ್ಮಣ ಎನ್ನುವುದು ಬ್ರಾಹ್ಮಣರಿಂದ ಪ್ರತ್ಯೇಕ ಎಂದು ಹೇಳಿಕೊಳ್ಳುವಂಥ ವಿಶೇಷತೆ ಏನೂ ಇಲ್ಲದ ಕೇವಲ ಒಂದು ಜಾತಿ/ಸಮುದಾಯವಾಗಿದೆ. ಹೀಗಾಗಿ, ಅದು ತನ್ನನ್ನು ತಾನು ಧಾರ್ಮಿಕ ಪಂಗಡ ಎಂದು ಹೇಳಿಕೊಳ್ಳಲು ಬರುವುದಿಲ್ಲ. ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲೂ ಆಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next