Advertisement

ಶಿಕ್ಷೆ ವಿಸ್ತರಣೆ ಮೊದಲು ಅಪರಾಧಿಯ ಅಭಿಪ್ರಾಯ ಆಲಿಸಿ; ಹೈಕೋರ್ಟ್‌ಗೆ ಸುಪ್ರೀಂಕೋರ್ಟ್‌ ಸಲಹೆ

12:27 PM Aug 20, 2022 | Team Udayavani |

ನವದೆಹಲಿ:ಅಪರಾಧಿಗಳಿಗೆ ನೀಡಲಾಗಿರುವ ಶಿಕ್ಷೆಯನ್ನು ವಿಸ್ತರಿಸುವ ಮುನ್ನ ಅವರಿಗೂ ನೋಟಿಸ್‌ ನೀಡಿ, ಅವರ ವಾದವನ್ನೂ ಆಲಿಸಬೇಕು ಎಂದು ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್‌ ಸಲಹೆ ನೀಡಿದೆ.

Advertisement

ಜತೆಗೆ ಈ ಬಗ್ಗೆ ರಾಜಸ್ಥಾನ ಹೈಕೋರ್ಟ್‌ ನೀಡಿದ್ದ ಆದೇಶವನ್ನು ವಜಾಗೊಳಿಸಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಹೈಕೋರ್ಟ್‌ ವ್ಯಕ್ತಿಯೊಬ್ಬನಿಗೆ ನೀಡಿದ್ದ ಶಿಕ್ಷೆಯನ್ನು ಆತನ ಜೀವನ ಪರ್ಯಂತದವರೆಗೆ ವಿಸ್ತರಿಸಿ ಆದೇಶ ನೀಡಿತ್ತು.

ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅಪರಾಧಿಯು ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾ.ಬಿ.ಆರ್‌.ಗವಾಯಿ ಮತ್ತು ನ್ಯಾ.ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠ, “ಹೈಕೋರ್ಟ್‌ಗಳು ಈ ಬಗ್ಗೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬಹುದಾದರೂ, ಶಿಕ್ಷೆಯನ್ನು ವಿಸ್ತರಿಸುವುದಕ್ಕೂ ಮೊದಲು ಅಪರಾಧಿಗೂ ನೋಟಿಸ್‌ ನೀಡಬೇಕು.

ಆತನಿಗೂ ತನ್ನ ಪರ ವಾದ ಮಂಡಿಸಲು ಅವಕಾಶ ಕಲ್ಪಿಸಬೇಕು. ಆದರೆ ಈ ಪ್ರಕರಣದಲ್ಲಿ ಆ ರೀತಿ ನಡೆದುಕೊಳ್ಳಲಾಗಿಲ್ಲ’ ಎಂದಿದೆ.

Advertisement

ಹೀಗಾಗಿ, ಶಿಕ್ಷೆಯ ವಿಸ್ತರಣೆ ಸಂದರ್ಭದಲ್ಲಿ ಅಪರಾಧಿಗಳ ಅಭಿಪ್ರಾಯಗಳನ್ನು ಹೈಕೋರ್ಟ್‌ ಕೇಳಬೇಕು.

ಹೀಗಾಗಿ, ಸದರಿ ವಿಚಾರದಲ್ಲಿ ಅರ್ಜಿದಾರರ ಅಭಿಪ್ರಾಯ ಕೇಳದೆ, ಹೈಕೋರ್ಟ್‌ ಶಿಕ್ಷೆಯನ್ನು ವಿಸ್ತರಿಸಿದ ಕ್ರಮ ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next