Advertisement

ಆಹಾರ ಕಲಬೆರಕೆ ಪ್ರಕರಣ : ದಿನಸಿ ಮಾರಾಟಗಾರನಿಗೆ “ಸುಪ್ರೀಂ’ರಿಲೀಫ್

08:39 PM Oct 30, 2021 | Team Udayavani |

ನವದೆಹಲಿ : ಆಹಾರ ಕಲಬೆರಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಧ್ಯಪ್ರದೇಶದ ನಾರಾಯಣ ಪ್ರಸಾದ್‌ ಸಾಹು ಎಂಬ ದಿನಸಿ ಅಂಗಡಿ ಮಾಲೀಕರೊಬ್ಬರ ವಿರುದ್ಧ ಕೆಳ ಹಂತದ ನ್ಯಾಯಾಲಯವೊಂದು ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

Advertisement

ಈತ ಮಾರಾಟ ಮಾಡುತ್ತಿದ್ದ ದಿನಸಿಯಲ್ಲಿ ಕಲಬೆರಕೆ ಇದೆ ಎಂಬುದಕ್ಕೆ ಸ್ಥಳೀಯ ಪ್ರಯೋಗಾಲಯ ನೀಡಿದ್ದ ಪ್ರಮಾಣಪತ್ರದ ಪ್ರತಿಯನ್ನು ಆರೋಪಿಗೂ ನೀಡಬೇಕು. ಪ್ರಮಾಣಪತ್ರದ ಬಗ್ಗೆ ಆರೋಪಿಗೆ ಆಕ್ಷೇಪಗಳಿದ್ದರೆ ಅದನ್ನು ಪ್ರಮಾಣಪತ್ರದ ಪ್ರತಿ ತನಗೆ ಬಂದ ದಿನದಿಂದ 10 ದಿನಗಳಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಯಾವ ಸ್ಯಾಂಪಲ್‌ ಮೂಲಕ ಪರೀಕ್ಷೆ ನಡೆಸಲಾಗಿದೆಯೋ ಆ ಸ್ಯಾಂಪಲ್‌ ಅನ್ನು ಕೇಂದ್ರೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲು ಆರೋಪಿಗೆ ಅವಕಾಶವಿರುತ್ತದೆ.

ಆದರೆ, ಈ ಪ್ರಕರಣದಲ್ಲಿ ಹಾಗೆ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next