Advertisement

ಸುಪ್ರಿಂಕೋರ್ಟ್‌ಗೆ ಹೋದ ವಕೀಲರು ವಿಶೇಷ ನಿಗಾದಲ್ಲಿ

09:12 AM Apr 03, 2020 | sudhir |

ಉಪ್ಪಿನಂಗಡಿ: ನಿಜಾಮುದ್ದೀನ್‌ ಸಮಾವೇಶದ ಸಂದರ್ಭ ದಿಲ್ಲಿಯಲ್ಲಿ ಇದ್ದರು ಎಂಬ ಕಾರಣಕ್ಕೆ ಉಪ್ಪಿನಂಗಡಿಯ ನ್ಯಾಯವಾದಿಯೊಬ್ಬರನ್ನು ಪೊಲೀಸ್‌ ಹಾಗೂ ಆರೋಗ್ಯ ಇಲಾಖೆ ವಶಕ್ಕೆ ಪಡೆದು ಮಂಗಳೂರಿನ ವಿಶೇಷ ನಿಗಾ ಘಟಕದಲ್ಲಿರಿಸಿದೆ.

Advertisement

ಕಾರ್ಯನಿಮಿತ್ತ ಸುಪ್ರೀಂ ಕೋರ್ಟಿಗೆ ಹೋಗಿದ್ದ ಅವರು 12 ದಿನಗಳ ಹಿಂದೆ ವಿಮಾನದಲ್ಲಿ ಬೆಂಗಳೂರಿಗೆ, ಅಲ್ಲಿಂದ ಬಸ್ಸಿನಲ್ಲಿ ಉಪ್ಪಿನಂಗಡಿಗೆ ತಲುಪಿದ್ದರು. ಕೋರ್ಟ್‌ನಲ್ಲಿ ಕೋವಿಡ್ 19 ತಪಾಸಣೆ ನಡೆಸುತ್ತಿರುವ ಛಾಯಾ
ಚಿತ್ರವೊಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದು ಅದು ಅವರ ಚಿತ್ರವೇ ಆಗಿದ್ದು, ತಾನು ಕೋರ್ಟ್‌ ಕಲಾಪಕ್ಕೆ ಹೋಗಿದ್ದೆ ಎಂದು ಸಾಬೀತುಪಡಿಸಲು ನೆರವಾಗಿದೆ. ಈ ನಡುವೆ ಅವರ ದಿಲ್ಲಿ ಪ್ರವಾಸಕ್ಕೂ ಸಮಾವೇಶಕ್ಕೂ ನಂಟು ಕಲ್ಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಬಿತ್ತರಗೊಂಡು ಗೊಂದಲ ಸೃಷ್ಟಿಯಾಗಿತ್ತು.

ಉಳ್ಳಾಲದ ಇಬ್ಬರ ಪರೀಕ್ಷೆ
ಉಳ್ಳಾಲ: ಸಮಾವೇಶದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿ ಪಿಲಾರು ದಾರಂದ ಬಾಗಿಲು, ಚೆಂಬುಗುಡ್ಡೆ ನಿವಾಸಿಗಳನ್ನು ವೆನಾÉಕ್‌ಗೆ ಕರೆದುಕೊಂಡು ಹೋಗಿದ್ದು, ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ ಅವರಿಬ್ಬರು ಬಾಂಗ್ಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫೆಬ್ರವರಿಯಲ್ಲಿ ಮರಳಿದವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next