Advertisement

ಚಿಕ್ಕಮಗಳೂರು: ಕೊಂಗಮಾಟಮ್ಮ ದೇವಾಲಯದಲ್ಲಿ ಆಜಾನ್ ಪ್ರತಿಯಾಗಿ ಮೊಳಗಿದ ಸುಪ್ರಭಾತ

01:37 PM May 09, 2022 | Team Udayavani |

ಚಿಕ್ಕಮಗಳೂರು: ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ ಆರಂಭವಾಗಿರುವ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆ 5.15ಕ್ಕೆ ಆಜಾನ್ ವೇಳೆ ಹಿಂದೂಗಳ ದೇವಸ್ಥಾನದಲ್ಲಿ ಸುಪ್ರಭಾತ ಮೊಳಗಿದೆ. ಚಿಕ್ಕಮಗಳೂರು ನಗರದ ಶಂಕರಪುರದಲ್ಲಿರುವ ಕೊಂಗಮಾಟಮ್ಮ ದೇವಾಲಯದಲ್ಲಿ ಸುಪ್ರಭಾತ ಮೊಳಗಿದೆ.

Advertisement

ಕಳೆದ ರಾತ್ರಿಯೇ ದೇವಾಲಯದ ಮೇಲ್ಬಾಗ ಮೈಕ್ ಕಟ್ಟಿ ಎಲ್ಲಾ ಸಿದ್ಧತೆ ನಡೆಸಿದ್ದ ಶ್ರೀರಾಮಸೇನೆ ಕಾರ್ಯಕರ್ತರು ಬೆಳಗ್ಗೆ 5.15ಕ್ಕೆ ಸುಪ್ರಭಾತ ಹಾಕಿದ್ದಾರೆ. ಕೋಟೆ ವೀರಭದ್ರಸ್ವಾಮಿ ದೇವಸ್ಥಾನ, ಕಲ್ಲೊಡ್ಡಿ ಶಿವನ ದೇವಸ್ಥಾನ, ನೇಕಾರ ಬೀದಿ ಶ್ರೀರಾಮನ ದೇವಸ್ಥಾನ, ಅಗಸರ ಬೀದಿ ಬನಶಂಕರಿ ದೇವಸ್ಥಾನದಲ್ಲಿ ಸುಪ್ರಭಾತ ಮೊಳಗುತ್ತಿದೆ.

ಇದನ್ನೂ ಓದಿ: ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರು ಭಯೋತ್ಪಾದಕರು : ಬಿ.ಕೆ ಹರಿಪ್ರಸಾದ್ ವಾಗ್ದಾಳಿ

ಇನ್ನು ಮುಂದೆ ದಿನಕ್ಕೆ ಮೂರು ಬಾರಿ ದೇವಾಲಯಗಳಲ್ಲಿ ಸುಪ್ರಭಾತ ಹಾಕಲು ಶ್ರೀರಾಮಸೇನೆ ಕಾರ್ಯಕರ್ತರು ತೀರ್ಮಾನಿಸಿ ದೇವಾಲಯದ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದ್ದಾರೆ. ಮುಸ್ಲಿಮರು ನಮಾಜ್ ಕೂಗುವ ವೇಳೆ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಮೂರು ಹೊತ್ತು ಸುಪ್ರಭಾತ ಹಾಕಲು ತೀರ್ಮಾನಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next