Advertisement

ಕುರುಗೋಡಲ್ಲಿ ಬಂದ್‌ಗೆ ಬೆಂಬಲ

06:38 AM May 25, 2020 | Team Udayavani |

ಕುರುಗೋಡು: ರಾಜ್ಯ ಸರಕಾರ ಭಾನುವಾರ ಲಾಕ್‌ ಡೌನ್‌ ಘೋಷಿಸಿರುವ ಹಿನ್ನೆಲೇ ಕುರುಗೋಡು ಪಟ್ಟಣವು ಸಂಪೂರ್ಣ ಸ್ತಬ್ಧವಾಗಿದ್ದು ಪಟ್ಟಣದ ಜನರು ಬೆಂಬಲ ಸೂಚಿಸಿದ್ದಾರೆ.

Advertisement

ಇನ್ನೂ ಪಟ್ಟಣದ ಕಂಪ್ಲಿ ರಸ್ತೆ, ಬಳ್ಳಾರಿ ರಸ್ತೆ, ಗೆಣಿಕೆಹಾಳ್‌ ರಸ್ತೆ, ಬಾದನಹಟ್ಟಿ ರಸ್ತೆಗಳಲ್ಲಿ ಜನರು ಮತ್ತು ವಾಹನಗಳು ಸಂಚಾರ ಇಲ್ಲದೆ ಬಿಕೋ ಎನ್ನುತ್ತಿವೆ.

ಕಿರಾಣಿ ಅಂಗಡಿಗಳು, ವೈನ್‌ ಶಾಪ್‌ಗ್ಳು, ತಂಪು ಪಾನೀಯಗಳು, ಬೇಕರಿಗಳು, ದಿನಸಿ ಅಂಗಡಿಗಳು, ಬಸ್‌ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು. ಸುಮಾರು ಎರಡು ತಿಂಗಳಿಂದ ಲಾಕ್‌ಡೌನ್‌ ಜಾರಿಯಾಗಿದ್ದು, ಹಲವು ಇಲಾಖೆ ಅಧಿಕಾರಿಗಳು ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿದರು ಜನರು ಅದಕ್ಕೆ ಕ್ಯಾರೇ ಎನ್ನದೇ ರಸ್ತೆಗೆ ಬರುತ್ತಿದ್ದರು. ಆದರೆ ಕೊರೊನಾ ಕರಿ ನೆರಳು ಗಣಿನಾಡಿಗೆ ಕಾಲಿಟ್ಟ ಹಿನ್ನೆಲೆ ಜನರು ಎಲ್ಲೆಂದರಲ್ಲಿ ಭಯಭೀತರಾಗಿ ಭಾನುವಾರ ಲಾಕ್‌ಡೌನ್‌ ಹಿನ್ನೆಲೆ ಯಾರು ರಸ್ತೆಗೆ ಬಾರದೆ ಮನೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next