Advertisement
ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಜೆಪಿ ಸರ್ಕಾರದಲ್ಲಿ ಒಂದು ಪೈಸೆಯೂ ಪ್ರೋತ್ಸಾಹಧನ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಪ್ಪು ಮಾಹಿತಿ ನೀಡಿದ ಸದನ ಹಾಗೂ ರಾಜ್ಯದ ಜನರ ದಾರಿ ತಪ್ಪಿಸಿದ್ದಾರೆ. ಇದರಿಂದ ನಮ್ಮ ಹಕ್ಕಿಗೆ ಚ್ಯುತಿಯಾಗಿದೆ. ಮುಖ್ಯಮಂತ್ರಿ ಉದ್ದೇಶ ಪೂರ್ವಕವಾಗಿಯೇ ಈ ರೀತಿಯ ಹೇಳಿಕೆ ನೀಡಿ, ಬಿಜೆಪಿ ವಿರುದ್ಧ ರಾಜಕೀಯ ಲಾಭ ಪಡೆಯುವ ದೃಷ್ಠಿಯಿಂದ ಈ ಹೇಳಿಕೆ ನೀಡಿದ್ದಾರೆ. ಇದು ಸದನ ಮತ್ತು ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ವಿರುದ್ಧ ಹಕ್ಕು ಚ್ಯುತಿ ಮಂಡಿಸುವುದಾಗಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಕ್ಕು ಚ್ಯುತಿ ಮಂಡಿಸಿದರು.
Related Articles
Advertisement
ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ಲಕ್ಷ್ಮಣ ಸವದಿ, ಉತ್ತಮ್ ಚಂದ್ ಗಾಂಧಿ ಎಂಬ ಗುಮಾಸ್ತನ ಕಥೆ ಹೇಳಿ, ಇತಿಹಾಸಕ್ಕೂ ವರ್ತಮಾನಕ್ಕೂ ವ್ಯತ್ಯಾಸ ಇದೆ ಎಂದರು. ಬಿಜೆಪಿಯ ಸಿಟಿ ರವಿ ಮಾತನಾಡಿ, ಮುಖ್ಯಮಂತ್ರಿಗಳು ಹಿರಿಯರು, ಮೂವತ್ತು ವರ್ಷ ಶಾಸಕರಾಗಿ ಅನುಭವ ಇರುವವರು, ನಮ್ಮಂಥ ಸಣ್ಣವರು ಮಾತು ತಪ್ಪಿ ಹೇಳಿದ್ದರೆ ಒಪ್ಪ ಬಹುದಿತ್ತು ಎಂದರು.
ಕಾನೂನು ಸಚಿವ ಟಿ.ಬಿ. ಜಯಚಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿಲ್ಲ. ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಯನ್ನು ಆವಾಗಲೇ ಸರಿಪಡಿಸಿಕೊಂಡು ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಹಣ ನೀಡಿರುವ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಹಕ್ಕುಚ್ಯುತಿಗೆ ವ್ಯಾಪ್ತಿಗೆ ಬರುವುದಿಲ್ಲ. ಈ ಪ್ರಕರಣವನ್ನು ಕೈ ಬಿಡಬೇಕೆಂದು ಮನವಿ ಮಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿಯಾದವರಿಗೆ ತಾಳ್ಮೆ, ಸಂಯಮ ಮುಖ್ಯ, ಸಾಕಷ್ಟು ಕೆಲಸದ ಒತ್ತಡ ಇರುತ್ತದೆ. ಹಾಗಂತ ಪ್ರತಿಪಕ್ಷಗಳ ಕಾರ್ಯವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇನ್ನು ಮುಂದಾದರೂ ಅವರು ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕು. ಹಾಗೂ ಸ್ಪೀಕರ ಕೊಡುವ ತೀರ್ಮಾನಕ್ಕೆ ಬದ್ದನಾಗುವುದಾಗಿ ತಿಳಿಸಿದರು. ಆಡಳಿತ ಮತ್ತು ಪ್ರತಿಪಕ್ಷದ ವಾದ ಆಲಿಸಿದ ವಿಧಾನಸಭಾಧ್ಯಕ್ಷ ಕೆ.ಬಿ ಕೋಳಿವಾಡ ತೀರ್ಪು ಕಾಯ್ದಿರಿಸಿದರು.
ಹಕ್ಕು ಚ್ಯುತಿ ಮಂಡನೆ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಉತ್ತಮ್ ಚಂದ್ ಗಾಂಧಿ ಎಂಬ ಗುಮಾಸ್ತನ ಕಥೆ ಹೇಳಿ, ಆತ ತನಗೆ ಬಂದಿರುವ ಉಡುಗೊರೆಯನ್ನು ರಾಜನಿಗೆ ನೀಡಲು ಹೋಗಿದ್ದಾ, ಆದರೆ, ರಾಜ ಗುಮಾಸ್ತನಿಗೆ ಬಂದಿರೋದು ನೀನೇ ಇಟ್ಟುಕೊ ಎಂದು ವಾಪಸ್ ಕಳುಹಿಸಿದಾ. ಆದರೆ, ನಮ್ಮ ರಾಜಕಾರಣಿಗಳು ಯಾರು ಹಾಗೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ವಾಚ್ ಪ್ರಕರಣವಾದ ಮೇಲೆ ಮುಖ್ಯಮಂತ್ರಿಗೆ ಸಚಿವ ರಾಯರೆಡ್ಡಿ ಬೆಲೆ ಬಾಳುವ ಗಿಫ್ಟ್ ಕೊಟ್ಟಿದ್ದನ್ನು ಬಿಸಾಕಿದ್ದಾರೆ ಎಂದು ರಾಯರೆಡ್ಡಿ ಕಾಲೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ರಾಯರೆಡ್ಡಿ, ಬಿಸಾಕಿಲ್ಲಾ ವಾಪಸ್ ನೀಡಿದ್ದಾರೆ. ಅದು ನನ್ನ ಸ್ವಂತ ಹಣದಲ್ಲಿ ಖರೀದಿಸಿದ್ದೇನೆ. ಅದಕ್ಕೆ ರಸೀದಿ ಇದೆ ಎಂದು ಹೇಳಿದರು. ಆಗ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ರಸೀದಿ ಇದ್ದರೆ ಸದನಕ್ಕೆ ತಂದು ಒಪ್ಪಿಸಿ, ಇಲ್ಲದಿದ್ದರೆ ಕಷ್ಟವಾಗುತ್ತೆ ಎಂದಾಗ ಸದನದಲ್ಲಿ ನಗೆಯ ಅಲೆ ಮೂಡಿತು.