Advertisement

ಭಾನುವಾರದ ರಾಶಿಫಲ : ಯಾರಿಗೆ ಶುಭ-ಯಾರಿಗೆ ಲಾಭ

07:55 AM Aug 08, 2021 | Team Udayavani |

ಮೇಷ: ದೈಹಿಕ ಮಾನಸಿಕ ಸುಖ ವೃದ್ಧಿ . ಅಧಿಕ ಶ್ರಮ ದಿಂದ ಕೂಡಿದ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಒತ್ತಡವಿದ್ದರೂ ಕಾರ್ಯ ಸಾಧಿಸಿದ ತೃಪ್ತಿ. ಭೂಮಿ ವಾಹನ ಆಸ್ತಿ ವಿಚಾರದಲ್ಲಿ ಪ್ರಗತಿ.

Advertisement

ವೃಷಭ: ವ್ಯವಹಾರ ಉದ್ಯೋಗಗಳಲ್ಲಿ ಹೆಚ್ಚಿನ ಗಮನ. ನಿರೀಕ್ಷಿತ ಧನಾಗಮನ. ಮಕ್ಕಳ ವಿಚಾರದಲ್ಲಿ ಸಂತಸ. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸುವ ಸಮಯ. ಗುರುಹಿರಿಯರಿಂದ ಪ್ರೋತ್ಸಾಹ.

ಮಿಥುನ: ಸಣ್ಣ ಪ್ರಯಾಣಗಳಿಗೆ ಅವಕಾಶ ಒದಗಿ ಬರುವುದು. ಆರೋಗ್ಯ ಮಧ್ಯಮ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ ಇದ್ದರೂ ಧನಾರ್ಜನೆಗೆ ಅಧಿಕ ಶ್ರಮ ವಹಿಸಬೇಕಾದೀತು. ಹಿರಿಯರ ಆರೋಗ್ಯ ಉತ್ತಮ.

ಕರ್ಕ: ಆರೋಗ್ಯದ ಬಗ್ಗೆ ಅಜಾಗ್ರತೆ ಸಲ್ಲದು. ದೀರ್ಘ‌ ಪ್ರಯಾಣಗಳಿಗೆ ಅವಕಾಶ. ಉದ್ಯೋಗ ವ್ಯವಹಾರದಲ್ಲಿ ಉತ್ತಮ ಪ್ರಗತಿ. ನಿರೀಕ್ಷಿತ ಧನಸಂಪತ್ತಿನ ಆಗಮನ. ಆಸ್ತಿಗಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ. ದಾಂಪತ್ಯ ಸುಖದಲ್ಲಿ ವೃದ್ಧಿ.

ಸಿಂಹ: ಮಾನಸಿಕವಾಗಿ ಸದೃಢರಾಗಿದ್ದರೂ ದೈಹಿಕ ವಿಚಾರದ ಬಗ್ಗೆ ಗಮನಹರಿಸಿ. ಉದ್ಯೋಗ ವ್ಯವಹಾರ ಗಳಲ್ಲಿ ನಿರಂತರ ಧನಾರ್ಜನೆ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ವಿದ್ಯಾರ್ಥಿಗಳಿಗೆ ಸದವಕಾಶ. ಆರೋಗ್ಯದ ಬಗ್ಗೆ ಗಮನಹರಿಸಿ.

Advertisement

ಕನ್ಯಾ: ದೀರ್ಘ‌ ಪ್ರಯಾಣದಲ್ಲಿ ದೇಹಾಯಾಸವಾದೀತು. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ. ಧನಾಗಮ ವಿಚಾರ ದಲ್ಲಿ ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆಗೊಳಗಾಗುವ ಸಂಭವ. ಆಸ್ತಿ ವಿಚಾರದಲ್ಲಿ ಪ್ರಗತಿ. ಆರೋಗ್ಯದ ಬಗ್ಗೆ ಗಮನವಿರಲಿ.

ತುಲಾ: ಆರೋಗ್ಯ ಸುದೃಢ. ದೈಹಿಕವಾಗಿಯೂ ಮಾನಸಿಕ ವಾಗಿಯೂ ಸಂತೋಷಪ್ರದ. ನಿರೀಕ್ಷಿತ ಕೆಲಸಕಾರ್ಯಗಳಲ್ಲಿ ಉದ್ಯೋಗ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಅಧ್ಯಯನ ಪ್ರವೃತ್ತಿ ಯವರಿಗೆ ಸದವಕಾಶ ಲಭ್ಯ. ಸಾಂಸಾರಿಕ ಸುಖ ಮಧ್ಯಮ.

 ವೃಶ್ಚಿಕ: ಉತ್ತಮ ನಾನಾರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಆಸ್ತಿ ವಿಚಾರದಲ್ಲಿ ಅಭಿವೃದ್ಧಿ ನಡೆ. ಮನೆಯಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಗುರುಹಿರಿಯರ ಆರೋಗ್ಯ ಸ್ಥಿರ.

ಧನು: ಮಾನಸಿಕ ಗೊಂದಲಗಳಿದ್ದರೂ ಶಾರೀರಿಕ ಸುಖ ಉತ್ತಮ. ಅನಿರೀಕ್ಷಿತ ಧನಾಗಮ. ಮಾತಿನಲ್ಲಿ ಎಚ್ಚರವಿರಲಿ. ಸಹೋದ್ಯೋಗಿಗಳ ಬಗ್ಗೆ ಗಮನಹರಿಸಿ. ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ ಸಂಭವ. ನೂತನ ಮಿತ್ರರ ಸಮಾಗಮ.

ಮಕರ: ಆರೋಗ್ಯ ಉತ್ತಮ ಆದರೂ ಶಿಸ್ತಿನ ಕೊರತೆ ಆಗದಂತೆ ಗಮನಹರಿಸಿ. ವಾಕ್‌ಚತುರತೆಯಿಂದ ಕೆಲಸಕಾರ್ಯಗಳಲ್ಲಿ ಜಯ. ಉತ್ತಮ ಧನಾರ್ಜನೆ. ಸಹೋದರ ಸಮಾನರು ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸ್ಪಂದನ.

ಕುಂಭ: ಭೂಮಿ, ವಾಹನ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ನಿರೀಕ್ಷಿತ ಪ್ರಗತಿ. ದೂರ ಪ್ರಯಾಣ ಸಂಭವ. ಅಧಿಕ ಧನಾರ್ಜನೆ. ಮಿತ್ರರಿಂದಲೂ ಬಂಧುಗಳಿಂದಲೂ ಉತ್ತಮ ಸಹಕಾರ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದಿಂದ ಕೂಡಿದ ದಿನ.

ಮೀನ: ಆರೋಗ್ಯ ಉತ್ತಮ. ಧನಾರ್ಜನೆ ತೃಪ್ತಿದಾಯಕ. ಅನ್ಯರ ಸಹಾಯ ದೊರಕದು. ಸ್ವಂತ ಪರಿಶ್ರಮದ ಮೇಲೆ ಗಮನವಿರಲಿ. ವಿದ್ಯಾರ್ಥಿಗಳಿಗೆ, ಗುರುಹಿರಿಯರಿಗೆ ಸಂತೋಷ ದಿಂದ ಕೂಡಿದ ದಿನ. ವ್ಯವಹಾರ ಉದ್ಯೋಗದಲ್ಲಿ ಪ್ರಗತಿ.

Advertisement

Udayavani is now on Telegram. Click here to join our channel and stay updated with the latest news.

Next