Advertisement

ರಾಜ್ಯ ಹೈಕೋರ್ಟ್‌ಗೆ ನಾಳೆಯಿಂದ ಬೇಸಿಗೆ ರಜೆ

11:17 PM Apr 27, 2019 | Team Udayavani |

ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಏಪ್ರಿಲ್‌ 29ರಿಂದ ಮೇ 25ರವರೆಗೆ ಬೇಸಿಗೆ ರಜೆ ಇರಲಿದೆ. ಈ ಅವಧಿಯಲ್ಲಿ ವಾರದಲ್ಲಿ ಎರಡು ದಿನ ಎರಡು ವಿಭಾಗೀಯ ಹಾಗೂ ಮೂರು ಏಕಸದಸ್ಯ ರಜಾ ಕಾಲದ ವಿಶೇಷ ನ್ಯಾಯಪೀಠಗಳು ಬೆಳಗ್ಗೆ 10.30ರಿಂದ ಕಾರ್ಯ ನಿರ್ವಹಿಸಲಿವೆ.

Advertisement

ಬೇಸಿಗೆ ರಜೆ ಅವಧಿಯಲ್ಲಿ ಏಪ್ರಿಲ್‌ 30 ಹಾಗೂ ಮೇ 3ರಂದು ನ್ಯಾ.ಬಿ.ವೀರಪ್ಪ ಹಾಗೂ ನ್ಯಾ.ಆರ್‌.ದೇವದಾಸ್‌ ಅವರ ವಿಭಾಗೀಯ ನ್ಯಾಯಪೀಠ ಮತ್ತು ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಸ್‌.ಮುದಗಲ್‌, ನ್ಯಾ.ಆರ್‌. ದೇವದಾಸ್‌ ಅವರ ಏಕಸದಸ್ಯ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ.

ಅದೇ ರೀತಿ, ಮೇ 8 ಹಾಗೂ 10ರಂದು ನ್ಯಾ.ಎನ್‌.ಕೆ.ಸುಧೀಂದ್ರರಾವ್‌ ಹಾಗೂ ನ್ಯಾ.ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರ ವಿಭಾಗೀಯ ನ್ಯಾಯಪೀಠ ಮತ್ತು ನ್ಯಾ.ಜಾನ್‌ ಮೈಕೆಲ್‌ ಕುನ್ಹಾ, ನ್ಯಾ.ಮೊಹಮ್ಮದ್‌ ನವಾಜ್‌, ನ್ಯಾ.ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರ ಏಕಸದಸ್ಯ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ.

ಮೇ 14 ಮತ್ತು 16ರಂದು ನ್ಯಾ.ಜಾನ್‌ ಮೈಕೆಲ್‌ ಕುನ್ಹಾ ಹಾಗೂ ನ್ಯಾ.ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರ ವಿಭಾಗೀಯ ನ್ಯಾಯಪೀಠ ಮತ್ತು ನ್ಯಾ.ಜಾನ್‌ ಮೈಕೆಲ್‌ ಕುನ್ಹಾ, ನ್ಯಾ.ಮೊಹಮ್ಮದ್‌ ನವಾಜ್‌, ನ್ಯಾ. ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರ ಏಕಸದಸ್ಯ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ.

ಅದೇ ರೀತಿ, ಮೇ 21 ಮತ್ತು 23ರಂದು ನ್ಯಾ.ಎಸ್‌.ಸುಜಾತ ಹಾಗೂ ನ್ಯಾ.ಎಸ್‌.ಜಿ.ಪಂಡಿತ್‌ ಅವರ ವಿಭಾಗೀಯ ನ್ಯಾಯಪೀಠ ಮತ್ತು ನ್ಯಾ.ಎಸ್‌.ಸುಜಾತ, ನ್ಯಾ.ಎಚ್‌.ಬಿ.ಪ್ರಭಾಕರ್‌ ಶಾಸ್ತ್ರೀ, ನ್ಯಾ.ಎಸ್‌.ಜಿ.ಪಂಡಿತ್‌ ಅವರ ಏಕಸದಸ್ಯ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next