Advertisement

Sumalatha Ambarish ಗೆದ್ದದ್ದು ಕಾಂಗ್ರೆಸ್‌ ಮತಗಳಿಂದಲೇ: ಸಿದ್ದರಾಮಯ್ಯ

12:02 AM Mar 11, 2024 | Team Udayavani |

ಮಂಡ್ಯ: ಹಿಂದಿನ ಚುನಾ ವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸಂಸದೆ ಸುಮಲತಾ ಅಂಬರೀಷ್‌ ತನ್ನ ಸ್ವಂತ ಬಲದಿಂದ ಗೆದ್ದಿದ್ದಲ್ಲ. ಜಿಲ್ಲೆಯ ಕಾಂಗ್ರೆಸ್‌ ಮತಗಳಿಂದಲೇ ಸಂಸದೆಯಾಗಿ ಗೆದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಮಂಡ್ಯದಲ್ಲಿ ರವಿವಾರ ಆಯೋಜಿಸ ಲಾಗಿದ್ದ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. “ಸುಮಲತಾ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ ಮತಗಳಿಂದ. ಈಗ ಬಿಜೆಪಿಯೊಂದಿಗೆ ಹೋಗಿದ್ದಾರೆ. ಇದರಿಂದ ಬಿಜೆಪಿ-ಜೆಡಿಎಸ್‌ ಮೈತ್ರಿ ಯಲ್ಲಿ ತಿಕ್ಕಾಟ ಆರಂಭವಾಗಿದೆ.

ಸುಮಲತಾಗೆ ಟಿಕೆಟ್‌ ಕೊಡಬೇಕೋ ಅಥವಾ ಜೆಡಿಎಸ್‌ಗೆ ಕೊಡಬೇಕೋ ಎಂಬ ಗೊಂದಲ ಹೆಚ್ಚಾಗಿದೆ. ಅಂಥ ಅಪವಿತ್ರ ಮೈತ್ರಿಯನ್ನು ಸೋಲಿಸುವ ಮೂಲಕ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ಮೈತ್ರಿಗೆ ಆಕ್ರೋಶ
ಹಿಂದೆ ಬಿಜೆಪಿಯನ್ನು ವಿರೋಧಿಸು ತ್ತಿದ್ದ ಜೆಡಿಎಸ್‌ಗೆ ಈಗ ಆ ಪಕ್ಷದ ಮೇಲೆ ಪ್ರೀತಿ ಬಂದಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸತ್ಯ ಒಪ್ಪಿಕೊಂಡದ್ದಕ್ಕೆ ಅಭಿನಂದನೆ
ಹಿಂದೆ ಸುಮಲತಾ ಗೆಲುವಿಗೆ ಕಾಂಗ್ರೆಸ್‌ ಮತಗಳೇ ಕಾರಣ ಎಂದು ಒಪ್ಪಿಕೊಂಡಿದ್ದೀರಿ. ಅದಕ್ಕಾಗಿ ಅಭಿನಂದನೆಗಳು. ಸತ್ಯ ಗಂಟಲಲ್ಲಿ ಸಿಕ್ಕಿಕೊಂಡ ಬಿಸಿತುಪ್ಪದಂತೆ, ಕಕ್ಕಲೇಬೇಕು. -ಎಚ್‌.ಡಿ. ಕುಮಾರಸ್ವಾಮಿ

Advertisement
Advertisement

Udayavani is now on Telegram. Click here to join our channel and stay updated with the latest news.

Next