Advertisement

Sulya: ಲೈನ್‌ ದುರಸ್ತಿ ವೇಳೆ ಕಾರ್ಮಿಕನಿಗೆ ವಿದ್ಯುತ್‌ ಆಘಾತ

12:24 AM Sep 18, 2024 | Team Udayavani |

ಸುಳ್ಯ: ವಿದ್ಯುತ್‌ ಲೈನ್‌ ಬದಲಾವಣೆಯ ದುರಸ್ತಿ ಮಾಡುತ್ತಿದ್ದಾ ಗ ವಿದ್ಯುತ್‌ ಸ್ಪರ್ಶಿಸಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬಂದಿಗೆ ಗಾಯವಾದ ಘಟನೆ ಮಂಗಳವಾರ ಸುಳ್ಯದ ಕೊಡಿಯಾಲಬೈಲಿನಲ್ಲಿ ಸಂಭವಿಸಿದೆ.

Advertisement

ವಿದ್ಯುತ್‌ ಕಂಬವೇರಿ ಖಾಸಗಿ ಎಲೆಕ್ಟಿಕಲ್‌ ಸಂಸ್ಥೆಯ ಸಿಬಂದಿ ಭವಿತ್‌ ಎಂಬ ಯುವಕ ವಿದ್ಯುತ್‌ ಬದಲಾವಣೆ ಮಾಡುತ್ತಿದ್ದ ಈ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ಲೈನ್‌ ಸ್ಮರ್ಶಿಸಿ ವಿದ್ಯುತ್‌ ಶಾಕ್‌ ತಗಲಿ ವಿದ್ಯುತ್‌ ಕಂಬದಿಂದ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.

ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೈನ್‌ ಆಫ್ ಮಾಡಿ ಕೆಲಸ ಮಾಡಲಾಗಿದ್ದರೂ, ವಿದ್ಯುತ್‌ ಶಾಕ್‌ ತಗಲಿದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next