Advertisement

ಸುಲ್ತಾನರೇ ಮಣ್ಣು ಮುಕ್ಕಿದ್ದಾರೆ, ಡಿಕೆಶಿ ಯಾವ ಲೆಕ್ಕ?

10:46 PM May 12, 2019 | Team Udayavani |

ಬನಹಟ್ಟಿ: “ಡಿ.ಕೆ. ಶಿವಕುಮಾರ್‌ ಸರ್ವಾಧಿ ಕಾರಿ ಧೋರಣೆ ತೋರುತ್ತಿರುವುದು ಇಂದು ನಿನ್ನೆಯದಲ್ಲ. ರಾಜ್ಯವನ್ನೇ ಕೊಳ್ಳೆ ಹೊಡೆದು ಅಕ್ರಮ ಆಸ್ತಿ ಮಾಡುವ ಮೂಲಕ ದುರಹಂಕಾರದಿಂದ ಮೆರೆಯುತ್ತಿದ್ದಾರೆ.

Advertisement

ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು. ಸುದ್ದಿಗಾರರ ಜತೆ ಮಾತನಾಡಿ, “ದೀಪ ಆರುವ ಮುನ್ನ ಎಣ್ಣೆಯಿಲ್ಲದೆ ಹೇಗೆ ದೊಡ್ಡದಾಗಿ ಉರಿಯುತ್ತದೆಯೋ ಅದೇ ರೀತಿ ಕಾಂಗ್ರೆಸ್‌ ಅಧೋಗತಿಯತ್ತ ಸಾಗಿ, ಅಧಿಕಾರ ಕಳೆದುಕೊಳ್ಳುವ ಎಲ್ಲ ಲಕ್ಷಣಗಳನ್ನೂ ಅರಿತಿರುವ ಡಿಕೆಶಿ ಹತಾಶೆ ಭಾವನೆಯಲ್ಲಿ ಮಾತನಾಡುತ್ತಿದ್ದಾರೆ.

ಈ ಭೂಮಿಯಲ್ಲಿ ನಿಜಾಮ, ಸುಲ್ತಾನರೇ ಮಣ್ಣು ಮುಕ್ಕಿ ಹೋಗಿದ್ದಾರೆ. ಅಂಥದರಲ್ಲಿ ಅಹಂ ಭಾವನೆಯಿಂದ ನಡೆಯುತ್ತಿರುವ ಡಿಕೆಶಿ ಅಂಥವರೆಲ್ಲಾ ಯಾವ ಲೆಕ್ಕ? ಸದ್ಯವೇ ಅವರಿಗೂ ಕೊನೆಗಾಲವಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next