Advertisement

ಸುಳ್ಯ: ಮಳೆ ಬಿರುಸು ಇಳಿಮುಖ

09:18 AM Aug 07, 2022 | Team Udayavani |

ಸುಳ್ಯ/ ಸುಬ್ರಹ್ಮಣ್ಯ : ಸುಳ್ಯ, ಸುಬ್ರಹ್ಮಣ್ಯ ಪರಿಸರದಲ್ಲಿ ನಿರಂತರ ಮಳೆಯಾಗುತ್ತಿದ್ದರೂ ಶನಿವಾರ ಬಿರುಸು ಕಡಿಮೆಯಾಗಿದೆ. ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಕುಮಾರ ಧಾರಾ ತುಂಬಿ ಹರಿಯುತ್ತಿದೆ. ಶನಿವಾರ ಬೆಳಗ್ಗೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಜಲಾವೃತಗೊಂಡಿದ್ದು, ಸಂಜೆ ನೆರೆ ನೀರು ಇಳಿಕೆ ಕಂಡಿದೆ.

Advertisement

ಕನ್ನಡಿ ಹೊಳೆ ಸೇತುವೆ ಬದಿ ಕುಸಿತ ಭೀತಿ
ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕನ್ನಡಿ ಹೊಳೆ ಸೇತುವೆ ಒಂದು ಬದಿ ಕುಸಿತ ಭೀತಿ ಉಂಟಾಗಿದೆ. ಸೇತುವೆಗೆ ಹಾನಿಯಾಗುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕುಸಿಯುತ್ತಿರುವ ಭಾಗಕ್ಕೆ ಕಲ್ಲುಗಳನ್ನು ಹಾಕಿ ತಾತ್ಕಾಲಿಕ ದುರಸ್ತಿ ನಡೆಸಲಾಗಿದೆ. 50 ವರ್ಷಗಳ ಹಳೆಯದಾದ ಸೇತುವೆ ಇದಾಗಿದೆ.

ಇದನ್ನೂ ಓದಿ : ಬಂಗಾಲಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ : ಕರಾವಳಿಯಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ

Advertisement

Udayavani is now on Telegram. Click here to join our channel and stay updated with the latest news.

Next