Advertisement

ಸುಲ್ಕೇರಿ: ನಿಲ್ಲಿಸಿದ್ದ ರೋಲರ್‌ಗೆ ಬೈಕ್‌ ಢಿಕ್ಕಿ; ಸವಾರ ಸಾವು

01:10 AM Mar 02, 2019 | Team Udayavani |

ವೇಣೂರು: ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯಲ್ಲಿ ಗುರುವಾರ ತಡರಾತ್ರಿ ಹೆದ್ದಾರಿಯಲ್ಲಿ ನಿಂತಿದ್ದ ರೋಲರ್‌ಗೆ  ಬೈಕ್‌ ಢಿಕ್ಕಿ ಹೊಡೆದು ಸವಾರ  ಮೃತಪಟ್ಟಿದ್ದಾರೆ.
    
ಸಂಬಂಧಿಕರ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದ ಬೆಳಾಲು ಗ್ರಾಮದ ಎರ್ಮಾಲು ಕೆರೆಕೋಡಿ ನಿವಾಸಿ ಶ್ರೀಧರ ಪೂಜಾರಿ ಮತ್ತು ಶ್ರೀಮತಿ ದಂಪತಿ ಪುತ್ರ, ಖಾಸಗಿ ಬಸ್‌ ನಿರ್ವಾಹಕ ಜಯಂತ (31) ಮೃತರು. 
 
ಇವರ ತಲೆ ಹಾಗೂ ತೊಡೆಯ ಭಾಗಕ್ಕೆ ತೀವ್ರ  ಗಾಯವಾಗಿತ್ತು. ಅವರನ್ನು ಬದ್ಯಾರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು, ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆ ಯುಸಿರೆಳೆದರು. ವೇಣೂರು  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹೆತ್ತ ವರ ಆರೋಪ
ರಿಫ್ಲೆಕ್ಟರ್‌  ಸಹಿತ ಯಾವುದೇ ಸುರಕ್ಷಾ ಕ್ರಮಗಳಿಲ್ಲದೆ ದೊಡ್ಡ ಗಾತ್ರದ ರೋಲರನ್ನು ಗುತ್ತಿಗೆದಾರರು ಹೆದ್ದಾರಿ ಮಧ್ಯೆ ನಿಲ್ಲಿಸಿದ್ದೇ ಘಟನೆಗೆ ಕಾರಣ ಎಂದು ಮೃತರ  ಹೆತ್ತವರು ಆರೋಪಿಸಿದ್ದಾರೆ.  

ಮನೆಯ ಆಧಾರ‌ವಾಗಿದ್ದರು
ಜಯಂತ ಪೂಜಾರಿಯ ಮೂವರು ಮಕ್ಕಳಲ್ಲಿ ಇವರೊಬ್ಬನೇ  ಪುತ್ರನಾಗಿದ್ದು,  ಇಬ್ಬರು ಸಹೋದರಿಯರಿಗೆ ಮದುವೆಯಾಗಿದೆ. ಹೆತ್ತವರು ಕೂಲಿ ಕೆಲಸ ಮಾಡುತ್ತಿದ್ದು, ಕುಟುಂಬಕ್ಕೆ ಇವರೇ ಆಧಾರವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next