Advertisement

ಮೊಬೈಲ್‌ ಬಿಟ್ಟು ಓದಿಕೋ ಎಂದಿದ್ದಕ್ಕೆ ಆತ್ಮಹತ್ಯೆ

06:00 AM Oct 10, 2018 | |

ಕಲಬುರಗಿ: ಸದಾ ಮೊಬೈಲ್‌ ಆಟದಲ್ಲೇ ತಲ್ಲೀನವಾಗಿರುತ್ತಿಯ, ಓದುವ ಕಡೆ ಲಕ್ಷವೇ ಇಲ್ಲ ಎಂದು 12 ವರ್ಷದ ಬಾಲಕನೊಬ್ಬನಿಗೆ ಪಾಲಕರು ಬುದ್ಧಿವಾದ ಹೇಳಿದ್ದಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಮಹಾಲಕ್ಷ್ಮೀ ಲೇ ಔಟ್‌ದಲ್ಲಿ ನಡೆದಿದೆ. ಸಮರ್ಥ ಸೂರಜ್‌ ಪಾಲನಕರ್‌ (12) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಸೆಂಟ್‌ ಮೇರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಸಮರ್ಥ ಅತ್ಯಂತ ಕ್ರಿಯಾಶೀಲನಾಗಿದ್ದ. ಆದರೆ ಮೊಬೈಲ್‌ ಗೀಳಿಗೆ ಅಂಟಿಕೊಂಡಿದ್ದ. ಎಂದಿನಂತೆ ಸೋಮವಾರ ಸಂಜೆ ಪಾಲಕರು ಬುದಿಟಛಿವಾದ ಹೇಳಿದ್ದಕ್ಕೆ ಮನೆಯಲ್ಲಿ
ರುವ ಮತ್ತೂಂದು ಕೋಣೆಗೆ ಹೋಗಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕ ಬ್ಲೂವೆಲ್‌ ಗೇಮ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ವದಂತಿ ಹಬ್ಬಿತ್ತು. ಆದರೆ ಇದನ್ನು ಮನೆಯವರು, ಎಎಸ್‌ಪಿ ಲೋಕೇಶ ಜಗಲಸಾರ್‌ ಅಲ್ಲಗಳೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next