Advertisement

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

11:36 PM Mar 21, 2023 | Team Udayavani |

ಕಾಪು: ಇಲ್ಲಿನ ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಯಲ್ಲಿ ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಮಂಗಳವಾರ ಸಂಜೆ ವೈಭವದ ಚಾಲನೆ ದೊರಕಿದ್ದು, ಬುಧವಾರ ಸಂಜೆಯ ವರೆಗೆ ಮುಂದುವರಿಯಲಿದೆ.

Advertisement

ಮಂಗಳವಾರ ರಾತ್ರಿ ಹಳೇ ಮಾರಿಗುಡಿಗೆ ಶ್ರೀ ವೆಂಕಟರಮಣ ದೇವಸ್ಥಾನ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಸ್ವರ್ಣಾಭರಣಗಳನ್ನು ಮೆರವಣಿಗೆಯ ಮೂಲಕ ತಂದು, ಬಳಿಕ ಹೊಂಗಾರಕನ ಮರದಲ್ಲಿ ಕೆತ್ತಿದ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ, ವಿವಿಧ ಪೂಜಾ ವಿಧಿವಿಧಾನ ನೆರವೇರಿಸಲಾಯಿತು.

ಬುಧವಾರ ಸಂಜೆ ತೆರೆ
ಮಂಗಳವಾರ ಮಧ್ಯರಾತ್ರಿಯ ಬಳಿಕ ದರ್ಶನ ಸೇವೆ ನಡೆದು, ಬುಧ ವಾರ ಮಧ್ಯಾಹ್ನದ ವರೆಗೆ ಭಕ್ತರಿಗೆ ಮಾರಿಯಮ್ಮ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಬುಧವಾರದ ಮಧ್ಯಾಹ್ನ ಪೂಜೆ ನಡೆದು, ಸಂಜೆ ದರ್ಶನ ಸೇವೆ ನಡೆಯುತ್ತದೆ. ಅಭಯ ಪ್ರಸಾದ ವಿತರಣೆ ಬಳಿಕ ದೇವಿಯ ಮೂರ್ತಿ ಯನ್ನು ಮೆರ ವಣಿಗೆಯಲ್ಲಿ ಒಯ್ದು, ವಿಸರ್ಜಿಸ ಲಾಗುತ್ತದೆ.

ಗದ್ದಿಗೆ ಪೂಜೆ ವಿಶೇಷ
ಮಾರಿಯಮ್ಮನ ಸನ್ನಿಧಿಯಲ್ಲಿ ಗದ್ದಿಗೆಪೂಜೆ ವಿಶೇಷವಾಗಿದ್ದು, ಹೂವಿನ ಪೂಜೆ, ಕುಂಕುಮಾರ್ಚನೆ ಸಹಿತ ವಿವಿಧ ಸೇವೆಗಳು, ಹರಕೆಗಳು ಸಮರ್ಪಿಸಲ್ಪಡುತ್ತವೆ. 3 ಮಾರಿಗುಡಿ ಗಳನ್ನೂ ವಿಶೇಷವಾಗಿ ಅಲಂಕರಿಸಲಾಗಿದೆ. ಸುಮಾರು 200ಕ್ಕೂ ಅಧಿಕ ಮಾರಾಟ ಮಳಿಗೆ ಗಳು ಆಕರ್ಷಿಸುತ್ತಿವೆ.

ಸ್ವರ್ಣ ಮುಖ ಸಿಂಹ ವಾಹನ ಸಮರ್ಪಣೆ
ಮುಂಬಯಿಯ ಸುನೀತಾ ಎಸ್‌. ಕಾಮತ್‌ ಮತ್ತು ಇತರ ಭಕ್ತರ ದೇಣಿಗೆಯೊಂದಿಗೆ ಹಳೇ ಮಾರಿಯಮ್ಮ ದೇವಸ್ಥಾನ ¨ ‌ಲ್ಲಿ ಶ್ರೀ ದೇವಿಯ ಸಿಂಹವಾಹನಕ್ಕೆ ಸ್ವರ್ಣ ಮುಖ ಸಮರ್ಪಣೆ ಗೊಂಡಿತು. ಸ್ವರ್ಣ ಮುಖ ಸಿಂಹವಾಹನದ ಪುರಪ್ರವೇಶ ಶೋಭಾಯಾತ್ರೆಯ ಬಳಿಕ ದೇವಿಯ ರಜತ ರಥೋತ್ಸವ ನಡೆಯಿತು. ವಿವಿಧ ಕಲಾತಂಡಗಳು ಯಾತ್ರೆಯಲ್ಲಿ ಭಾಗವಹಿಸಿದ್ದವು.

Advertisement

ಶಿಲಾ ಸೇವೆ ಸಮರ್ಪಣೆ
ಹೊಸ ಮಾರಿಗುಡಿಯಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಶಿಲಾ ಸೇವೆ ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗಿದ್ದು, ಸಾವಿರಾರು ಮಂದಿ ಶಿಲಾ ಸೇವೆ ಸಮರ್ಪಣೆ ಯಲ್ಲಿ ಪಾಲ್ಗೊಂಡಿದ್ದಾರೆ.

ಬಿಗು ಬಂದೋಬಸ್ತ್ ಆದ್ಯತೆ
ಮೂರೂ ಮಾರಿಗುಡಿಗಳ ಸುತ್ತಲೂ ಬಿಗು ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಸ್ಥಳೀಯಾಡಳಿತದಿಂದ ಸ್ವತ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಇದನ್ನೂ ಓದಿ: ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

Advertisement

Udayavani is now on Telegram. Click here to join our channel and stay updated with the latest news.

Next