Advertisement

ಸುಡುಬಿಸಿಲಿನಲ್ಲಿ ನೀರು ಪೋಲು !

12:01 PM Mar 17, 2017 | Team Udayavani |

ಉಡುಪಿ: ಪುತ್ತಿಗೆ ಸೇತುವೆಯಿಂದ ಹಿರಿಯಡಕಕ್ಕೆ ಬರುವ ಪಕ್ಕದಲ್ಲಿ ಕುಡಿಯುವ ನೀರಿನ ಯೋಜನೆ ನೀರು ಪೋಲಾಗುತ್ತಿದೆ. ಈ ಬೇಸಗೆ ಹಿಂದಿನ ಬೇಸಗೆ ಗಿಂತ ತೀವ್ರವಾಗಿದ್ದು, ನೀರಿನ ಅಭಾವ ವಿರುವಾಗ ಈ ತೆರನಾಗಿ ನೀರು ಪೋಲಾಗಬಾರದು.

Advertisement

ಹಿರಿಯಡಕ ಗ್ರಾ.ಪಂ.ಗೆ ಸೇರಿದ ಸ್ವರ್ಣಾ ನದಿಯಿಂದ ಬರುವ ನೀರಿನ ಕೊಳವೆಯಲ್ಲಿ ದೋಷ ಕಂಡು ಬಂದು ಈ ಸ್ಥಿತಿ ತಲುಪಿದೆ. ನೀರು ಪೋಲಾಗುತ್ತಿರುವುದನ್ನು ಪೆರ್ಡೂರಿನ ನಿವಾಸಿ ಸುಧಾಕರ ಶೆಟ್ಟಿ ಗಮನಕ್ಕೆ ತಂದಿದ್ದಾರೆ. ಸ್ವರ್ಣಾ ನದಿಯಲ್ಲಿ ಈಗಾಗಲೇ ನೀರಿನ ಪ್ರಮಾಣ ಬಹಳ ಕಡಿಮೆಯಿದ್ದು, ಉಡುಪಿ ನಗರಕ್ಕೆ ಸುಮಾರು 110 ಎಚ್‌ಪಿಯ 8 ಡೀಸೆಲ್‌ ಎಂಜಿನ್‌ ಬಳಸಿ ಶೀರೂರಿನ ಸಮೀಪ ಸಾಣೆ ಕಲ್ಲುವಿನಲ್ಲಿ ಗುಂಡಿಯಿಂದ ನೀರುಎತ್ತುವ ಕಾರ್ಯ ಸಾಗಿದೆ. ಹೀಗಿರು ವಾಗ ಈ ರೀತಿ ನೀರು ಪೋಲಾಗುತ್ತಿರುವುದು ಸರಿಯಲ್ಲ ಎಂದು ಗಣೇಶ್‌ ರಾಜ್‌ ಸರಳೇಬೆಟ್ಟು, ಉದ್ಯಮಿ ಸುಧೀರ್‌ ಶೆಟ್ಟಿ  ಹಿರಿಯಡಕ ತಿಳಿಸಿದ್ದಾರೆ. 

ಇತ್ತೀಚೆಗೆ ಹಿರಿಯಡಕ ಪ.ಪೂ. ಕಾಲೇಜು ಬಳಿ ಚರಂಡಿ ದುರಸ್ತಿ ನಡೆಯುವಾಗ ಕೊಳವೆಗೆ ಧಕ್ಕೆಯಾಗಿ ನೀರು ಪೋಲಾಗಿತ್ತು. ತತ್‌ಕ್ಷಣ ಇದನ್ನು ಸರಿಪಡಿಸಿದ್ದೆವು. ಈಗ ರಸ್ತೆ ಬದಿ ಹಾಕಿದ ಕೊಳವೆ ಮಾರ್ಗ ವಾಹನಗಳ ಭರಾಟೆಯಲ್ಲಿ ಹಾಳಾಗಿದೆ. ಇದನ್ನು ಶುಕ್ರವಾರವೇ ಸರಿಪಡಿಸುತ್ತೇವೆ ಎಂದು ಗ್ರಾ.ಪಂ. ಅಧ್ಯಕ್ಷೆ ಮಾಲತಿ ಆಚಾರ್ಯ, ಮಾಜಿ ಅಧ್ಯಕ್ಷ ಸುರೇಶ ನಾಯಕ್‌ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next