Advertisement

ಸುದಿರ್ಮನ್‌ ಕಪ್‌ Badminton: ಭಾರತಕ್ಕೆ ಗೆಲುವಿನ ಸಮಾಧಾನ

12:35 AM May 18, 2023 | Team Udayavani |

ಸುಝೋವ್‌ (ಚೀನ): ಭಾರತ ತಂಡ “ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಸಮಾಧಾನಕರ ಗೆಲುವು ಸಾಧಿಸಿದೆ.

Advertisement

“ಸಿ” ವಿಭಾಗದ ಸ್ಪರ್ಧೆಯಲ್ಲಿ ಈಗಾ ಗಲೇ ತೈವಾನ್‌ ಮತ್ತು ಮಲೇಷ್ಯಾ ವಿರುದ್ಧ ಕ್ರಮವಾಗಿ 4-1, 5-0 ಅಂತರದಿಂದ ಸೋತು ಕೂಟದಿಂದ ಹೊರಬಿದ್ದಿದ್ದ ಭಾರತ, ಬುಧವಾರ ಆಸ್ಟ್ರೇಲಿಯವನ್ನು 4-1 ಅಂತರದಿಂದ ಪರಾಭವಗೊಳಿಸಿತು.

ಭಾರತ ಮಿಶ್ರ ಡಬಲ್ಸ್‌ನಲ್ಲಷ್ಟೇ ಸೋಲನುಭವಿಸಿತು. ಉಳಿದಂತೆ ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ 21-8, 21-8ರಿಂದ ಜಾಕ್‌ ಯು ಅವರನ್ನು, ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಬದಲು ಆಡಲಿಳಿದ ಅನುಪಮಾ ಉಪಾಧ್ಯಾಯ 21-16, 21-18ರಿಂದ ಟಿಫಾನಿ ಹೊ ಅವರನ್ನು ಮಣಿಸಿದರು.

ಪುರುಷರ ಡಬಲ್ಸ್‌ ಸ್ಪರ್ಧೆಯಲ್ಲಿ ಧ್ರುವ ಕಪಿಲ-ಎಂ.ಆರ್‌. ಅರ್ಜುನ್‌ ಸೇರಿಕೊಂಡು ಟಾಂಗ್‌-ರಿಯಾನ್‌ ವಾಂಗ್‌ರನ್ನು 21-11, 21-12ರಿಂದ ಹಿಮ್ಮೆಟ್ಟಿಸಿದರು. ಬಳಿಕ ವನಿತಾ ಡಬಲ್ಸ್‌ ಸರದಿ. ಇಲ್ಲಿ ತನಿಶಾ ಕ್ರಾಸ್ಟೊ- ಅಶ್ವಿ‌ನಿ ಪೊನ್ನಪ್ಪ 21-19, 21-13ರಿಂದ ಕ್ಯಾಟಿÉನ್‌ ಎ- ಆ್ಯಂಜೆಲಾ ಯು ಅವರನ್ನು 21-19, 21-13ರಿಂದ ಪರಾಭವ ಗೊಳಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next